ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಆಲ್ ಇಂಡಿಯಾ ಫೇರ್ ಪ್ರೈಸ್ ಶಾಪ್ ಡೀಲರ್ ಫೆಡರೇಷನ್ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಾವು ಸಂಗ್ರಹಿಸಿದ ಹಣವನ್ನು ಭದ್ರಪಡಿಸಿ ಕೊಳ್ಳಲು ಕೆಲವರು ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ. ಅಂಥವರು ಒಂದೊಮ್ಮೆ ಟಿಎಂಸಿಯಲ್ಲೇ ಉಳಿದಿದ್ದರೂ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುತ್ತಿರಲಿಲ್ಲ‘ ಎಂದು ಹೇಳಿದರು.