ಲಖನೌ: ಬಿಜೆಪಿ ವಕ್ತಾರ ಸಯ್ಯದ್ ಜಾಫರ್ ಇಸ್ಲಾಂ ಅವರು ಉತ್ತರ ಪ್ರದೇಶದಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
ಸಚಿವ ಸುರೇಶ್ ಕುಮಾರ್ ಖನ್ನಾ ಅವರ ಉಪಸ್ಥಿತಿಯಲ್ಲಿ ವಿಧಾನಸಭೆಯ ವಿಶೇಷ ಕಾರ್ಯದರ್ಶಿ ಮತ್ತು ಚುನಾವಣಾ ಅಧಿಕಾರಿ ಬ್ರಿಜಿಭೂಷಣ್ ದುಬೆ ಅವರು ಜಾಫರ್ ಅವರ ಅಧಿಕೃತ ಪ್ರತಿನಿಧಿ ಜೆಪಿಎಸ್ ರಾಥೋಡ್ ಅವರಿಗೆ ಪ್ರಮಾಣಪತ್ರ ನೀಡಿದರು.
ನಾಮಪತ್ರ ಹಿಂಪಡೆಯಲು ಇಂದು (ಶುಕ್ರವಾರ) ಕೊನೆಯ ದಿನವಾಗಿತ್ತು.