<p class="title"><strong>ನವದೆಹಲಿ:</strong> 2002ರಲ್ಲಿ ನಡೆದಗುಜರಾತ್ ನರಮೇಧದ ಕುರಿತಾಗಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧ ಆಂದೋಲನ ನಡೆಸಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಿಂದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದ್ದರು ಎಂಬ ಬಿಜೆಪಿ ಆರೋಪ ಆಧಾರರಹಿತ ಎಂದು ಕಾಂಗ್ರೆಸ್ ಹೇಳಿದೆ.</p>.<p class="title">‘ಬಿಜೆಪಿಯ ಈ ಆರೋಪವು ಆಧಾರರಹಿತ ಮತ್ತು ಸುಪ್ರೀಂ ಕೋರ್ಟ್ ಆದೇಶದ ನೇರ ನ್ಯಾಯಾಂಗ ನಿಂದನೆಯಾಗಿದೆ’ ಎಂದುಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದಾರೆ.</p>.<p class="title"><a href="https://www.prajavani.net/india-news/activist-teesta-setalvad-detained-a-day-after-court-ruling-on-2002-riots-948960.html" itemprop="url">ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಗುಜರಾತ್ ಎಟಿಎಸ್ ವಶಕ್ಕೆ </a></p>.<p class="title">ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ‘ಸೆಟಲ್ವಾಡ್ ಅವರು ನಡೆಸುತ್ತಿದ್ದ ಎನ್ಜಿಒಗೆ ಯುಪಿಎ ಸರ್ಕಾರ ಅದರಲ್ಲೂ ಮುಖ್ಯವಾಗಿ ಆಗಿನ ಶಿಕ್ಷಣ ಸಚಿವಾಲಯ ₹1.4 ಕೋಟಿ ನೀಡಿತ್ತು. ಈ ಹಣವನ್ನು ಮೋದಿ ಹಾಗೂ ಭಾರತಕ್ಕೆ ಅಪಮಾನವಾಗಿಸುವ ಆಂದೋಲನಕ್ಕೆ ಬಳಸಲಾಗಿತ್ತು. ಇದರಲ್ಲಿ ಸೆಟಲ್ವಾಡ್ ಅವರು ಒಬ್ಬರೇ ಇಲ್ಲ. ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವೂ ಇದೆ’ ಎಂದು ಆರೋಪಿಸಿದ್ದರು.</p>.<p>2002ರ ಗೋಧ್ರಾ ಹತ್ಯಾಕಾಂಡದ ನಂತರದ ಹಿಂಸಾಚಾರಗಳ ಕುರಿತು ಮೋದಿ ಹಾಗೂ ಇತರರನ್ನು ಎಸ್ಐಟಿ ದೋಷಾರೋಪ ಮುಕ್ತವಾಗಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿ ಹಾಕಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> 2002ರಲ್ಲಿ ನಡೆದಗುಜರಾತ್ ನರಮೇಧದ ಕುರಿತಾಗಿ ಆಗಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧ ಆಂದೋಲನ ನಡೆಸಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಿಂದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇದ್ದರು ಎಂಬ ಬಿಜೆಪಿ ಆರೋಪ ಆಧಾರರಹಿತ ಎಂದು ಕಾಂಗ್ರೆಸ್ ಹೇಳಿದೆ.</p>.<p class="title">‘ಬಿಜೆಪಿಯ ಈ ಆರೋಪವು ಆಧಾರರಹಿತ ಮತ್ತು ಸುಪ್ರೀಂ ಕೋರ್ಟ್ ಆದೇಶದ ನೇರ ನ್ಯಾಯಾಂಗ ನಿಂದನೆಯಾಗಿದೆ’ ಎಂದುಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದಾರೆ.</p>.<p class="title"><a href="https://www.prajavani.net/india-news/activist-teesta-setalvad-detained-a-day-after-court-ruling-on-2002-riots-948960.html" itemprop="url">ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಗುಜರಾತ್ ಎಟಿಎಸ್ ವಶಕ್ಕೆ </a></p>.<p class="title">ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ‘ಸೆಟಲ್ವಾಡ್ ಅವರು ನಡೆಸುತ್ತಿದ್ದ ಎನ್ಜಿಒಗೆ ಯುಪಿಎ ಸರ್ಕಾರ ಅದರಲ್ಲೂ ಮುಖ್ಯವಾಗಿ ಆಗಿನ ಶಿಕ್ಷಣ ಸಚಿವಾಲಯ ₹1.4 ಕೋಟಿ ನೀಡಿತ್ತು. ಈ ಹಣವನ್ನು ಮೋದಿ ಹಾಗೂ ಭಾರತಕ್ಕೆ ಅಪಮಾನವಾಗಿಸುವ ಆಂದೋಲನಕ್ಕೆ ಬಳಸಲಾಗಿತ್ತು. ಇದರಲ್ಲಿ ಸೆಟಲ್ವಾಡ್ ಅವರು ಒಬ್ಬರೇ ಇಲ್ಲ. ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವೂ ಇದೆ’ ಎಂದು ಆರೋಪಿಸಿದ್ದರು.</p>.<p>2002ರ ಗೋಧ್ರಾ ಹತ್ಯಾಕಾಂಡದ ನಂತರದ ಹಿಂಸಾಚಾರಗಳ ಕುರಿತು ಮೋದಿ ಹಾಗೂ ಇತರರನ್ನು ಎಸ್ಐಟಿ ದೋಷಾರೋಪ ಮುಕ್ತವಾಗಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿ ಹಾಕಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>