‘ತನ್ನ ಕೆಲ ಶ್ರೀಮಂತ ಗೆಳೆಯರಿಗೆ ಪ್ರಯೋಜನ ಮಾಡಿಕೊಡಲು ಪ್ರಧಾನಿ ಅನುಸರಿಸಿದ ನೀತಿಯು ಬಡ ಮತ್ತು ಮಧ್ಯಮ ವರ್ಗದವರಿಗೆ ದುಬಾರಿಯಾಗಿ ಪರಿಣಮಿಸಿ, ನಿರಂತರ ಅನಾಹುತಗಳನ್ನು ಉಂಟು ಮಾಡಿದೆ. ನೋಟು ಅಮಾನ್ಯೀಕರಣ, ಕೆಟ್ಟದಾಗಿ ವಿನ್ಯಾಸಗೊಳಿಸಿದ ಜಿಎಸ್ಟಿ, ಮೂರು ಕೃಷಿ ಕಾನೂನುಗಳನ್ನು ತರಲು ನಡೆಸಿದ ವಿಫಲ ಪ್ರಯತ್ನ ಹಾಗೂ ಬಳಿಕ ಕೃಷಿಯನ್ನು ನಿರ್ಲಕ್ಷಿಸಿದ್ದರಿಂದ ಸಾಕಷ್ಟು ತೊಂದರೆಗಳನ್ನು ದೇಶದ ಜನರು ಎದುರಿಸಬೇಕಾಯಿತು’ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.