ಸರ್ಕಾರಕ್ಕೆ ಮಾರ್ಗದರ್ಶನ ನೀಡಬಲ್ಲ ಸಪ್ತರ್ಷಿ ಎಂಬ ಏಳು ಪ್ರಮುಖ ಕ್ಷೇತ್ರಗಳ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಅವುಗಳಲ್ಲಿ ಸಮಗ್ರ ಅಭಿವೃದ್ದಿ, ಅಂತಿಮ ಗುರಿ ತಲುಪುವುದು, ಮೂಲಸೌಕರ್ಯ ಮತ್ತು ಹೂಡಿಕೆ, ಸಾಮರ್ಥ್ಯ ಅನ್ವೇಷಣೆ, ಹಸಿರು ಅಭಿವೃದ್ದಿ, ಯುವ ಶಕ್ತಿ, ಹಣಕಾಸು ವಲಯಗಳನ್ನು ಒಳಗೊಂಡಿದೆ. ’ಈ ಬಜೆಟ್ ಭಾರತದ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ’ ಎಂದು ಪಟೇಲ್ ಟ್ವೀಟ್ ಮೂಲಕ ತಿಳಿಸಿದ್ದಾರೆ.