ಮುಂಬೈ: ₹ 10 ಲಕ್ಷ ಸಾಲ ಕೇಳಿದ ವ್ಯಕ್ತಿಯೊಬ್ಬ ಕೊಡದಿದ್ದರೆ ಬ್ಯಾಂಕ್ಅನ್ನು ಬಾಂಬ್ ಇಟ್ಟು ಉಡಾಯಿಸುವುದಾಗಿ ಬೆದರಿಕೆ ಒಡ್ಡಿದ ಘಟನೆ ದಕ್ಷಿಣ ಮುಂಬೈನ ಎಸ್ಬಿಐ ಬ್ಯಾಂಕ್ನಲ್ಲಿ ನಡೆದಿದೆ. ಬ್ಯಾಂಕ್ನ ಮುಖ್ಯಸ್ಥನನ್ನು ಅಪಹರಿಸಿ, ಹತ್ಯೆ ಮಾಡುವುದಾಗಿಯೂ ಹೆದರಿಸಿದ್ದಾನೆ.
ದೂರವಾಣಿ ಮೂಲಕ ಸಂಪರ್ಕಿಸಿದ ವ್ಯಕ್ತಿ ತನ್ನನ್ನು ಮೊಹಮ್ಮದ್ ಜಿಯಾ ಅಲಿ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಬ್ಯಾಂಕ್ನ ಸಹಾಯಕ ಭದ್ರತಾ ಮ್ಯಾನೆಜರ್ ಅಜಯ್ ಕುಮಾರ್ ಶ್ರೀವಾಸ್ತವ್ ತಿಳಿಸಿದ್ದಾರೆ.
ನಾರಿಮನ್ ಪಾಯಿಂಟ್ ಪ್ರದೇಶದಲ್ಲಿರುವ ಎಸ್ಬಿಐನ ಕಾರ್ಪೋರೇಟ್ ಕೇಂದ್ರದಲ್ಲಿ ಬುಧವಾರ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬೆದರಿಕೆ ಕರೆ ಪಶ್ಚಿಮ ಬಂಗಾಳದಿಂದ ಬಂದಿದ್ದಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರ ಒಂದು ತಂಡವನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.