ನವದೆಹಲಿ: ಸಾಲ ನೀಡಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇತೃತ್ವದ ಬ್ಯಾಂಕುಗಳ ಕೂಟಕ್ಕೆ ₹ 826 ಕೋಟಿ ವಂಚಿಸಿದ ಆರೋಪದ ಮೇಲೆ ವೈ.ಎಸ್.ಆರ್.ಕಾಂಗ್ರೆಸ್ ಪಾರ್ಟಿಯ ಸಂಸದ ಕನಮುರು ರಘುರಾಮಕೃಷ್ಣ ರಾಜು, ಪತ್ನಿ ಹಾಗೂ ಇತರ ಒಂಬತ್ತು ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ರಾಜು ಒಡೆತನದ ಇಂಡ್–ಭಾರತ್ ಥರ್ಮಲ್ ಪವರ್ ಲಿ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ 300 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸ್ಥಾವರ ಸ್ಥಾಪನೆಗೆ ಸಾಲ ಪಡೆದಿತ್ತು ಎಂದು ಸಿಬಿಐ ತಿಳಿಸಿದೆ.