ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿವಿವಾದ: ಕೇಂದ್ರದ ಮೌನ ಸರಿಯಲ್ಲ- ಶರದ್‌ ಪವಾರ್

Last Updated 8 ಡಿಸೆಂಬರ್ 2022, 14:21 IST
ಅಕ್ಷರ ಗಾತ್ರ

ಮುಂಬೈ: ಕರ್ನಾಟಕ –ಮಹಾರಾಷ್ಟ್ರ ನಡುವಣ ಗಡಿವಿವಾದ ಉದ್ವಿಗ್ನಗೊಂಡಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮೂಕಪ್ರೇಕ್ಷಕನಂತೆ ಇರುವುದು ಸರಿಯಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಹೇಳಿದ್ದಾರೆ.

ಭಾಷಾ ಮಾಧ್ಯಮ ಮತ್ತು ಹೋರಾಟವನ್ನು ಹತ್ತಿಕ್ಕಲು ಅಧಿಕಾರ ದುರ್ಬಳಕೆ ಆದಾಗ ಆ ಬಗ್ಗೆ ಪ್ರತಿಕ್ರಿಯಿಸಲೇ ಬೇಕು. ಆದರೆ, ಕೇಂದ್ರ ಈ ವಿಷಯದಲ್ಲಿ ಕುರುಡಾಗಿದೆ ಎಂದು ಅವರು ಹೇಳಿದರು.

‘ಲೋಕಸಭೆಯಲ್ಲಿ ಬುಧವಾರ ಸುಪ್ರಿಯಾ ಸುಳೆ ಈ ವಿಷಯ ಪ್ರಸ್ತಾಪಿಸಿದಾಗ, ಇದು ಇಲ್ಲಿ ಚರ್ಚಿಸುವ ವಿಷಯವಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. ಸಂಸತ್ತು ಗಮನಿಸದಿದ್ದರೆ ಇನ್ಯಾರು ಗಮನಿಸಬೇಕು’ ಎಂದು ಪವಾರ್ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT