‘ಇಂಧನ ಮತ್ತು ಅನಿಲ ಬೆಲೆ ವಿಪರೀತ ಏರಿಕೆಯಾಗುತ್ತಿರುವುದಕ್ಕೆ ಸಂಬಂಧಿಸಿ ನಾಗರಿಕರ ದುಃಖ ಮತ್ತು ಸಂಕಟವನ್ನು ನಿಮ್ಮ ಗಮನಕ್ಕೆ ತರುವ ಸಲುವಾಗಿ ಈ ಪತ್ರ ಬರೆಯುತ್ತಿದ್ದೇನೆ. ಮತ್ತೊಂದೆಡೆ, ದೇಶದಲ್ಲಿ ಉದ್ಯೋಗ, ವೇತನ, ಆದಾಯದಲ್ಲಿ ಕಡಿತವಾಗುತ್ತಿದೆ. ಮಧ್ಯಮ ವರ್ಗ ಮತ್ತು ಬಡತನದ ಅಂಚಿನಲ್ಲಿರುವ ಸಮುದಾಯಗಳು ಸಂಕಷ್ಟಕ್ಕೀಡಾಗಿವೆ. ಹಣದುಬ್ಬರ ಏರಿಕೆ, ಗೃಹೋಪಯೋಗಿ ಹಾಗೂ ಅಗತ್ಯ ವಸ್ತುಗಳ ಬೆಲೆ ಭಾರಿ ಏರಿಕೆಯಾಗುತ್ತಿರುವುದು ಸವಾಲುಗಳನ್ನು ಹೆಚ್ಚಿಸಿದೆ’ ಎಂದು ಸೋನಿಯಾ ಉಲ್ಲೇಖಿಸಿದ್ದಾರೆ.