ಮಂಗಳವಾರ, ಮಾರ್ಚ್ 21, 2023
23 °C

ಮಹಾರಾಷ್ಟ್ರದಲ್ಲಿ ₹1 ಸಾವಿರ ಲಂಚ ಪಡೆಯುತ್ತಿದ್ದ ನಾಗರಿಕ ಅಧಿಕಾರಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಥಾಣೆ( ಮಹಾರಾಷ್ಟ್ರ) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ₹1 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಾಗೂ ಸ್ವೀಕರಿಸಿದ ಆರೋಪದ ಮೇಲೆ ನಾಗರಿಕ ಅಧಿಕಾರಿಯೊಬ್ಬರನ್ನು  ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.

ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಭದ್ರತಾ ಅಧಿಕಾರಿಯೊಬ್ಬರು, ಭದ್ರತಾ ಸಿಬ್ಬಂದಿ ಹಾಗೂ ಅವರ ಸಹೋದ್ಯೋಗಿಯಿಂದ ನಿಗದಿತ ಪೋಸ್ಟಿಂಗ್ ನೀಡುವುದಕ್ಕಾಗಿ ಲಂಚ ಕೇಳಿದ ಆರೋಪದ ಮೇಲೆ ಥಾಣೆ ಘಟಕ ಎಸಿಬಿಗೆ ಸಿಕ್ಕಿಬಿದ್ದಿದ್ದಾನೆ.

ಆರೋಪಿಯು ದೂರುದಾರರಿಂದ ₹500  ಹಾಗೂ ಅದೇ ಮೊತ್ತವನ್ನು ನಾಗರಿಕ ಸಂಸ್ಥೆಗೆ ಭದ್ರತಾ ಸೇವೆಗಳನ್ನು ಒದಗಿಸುವ ಏಜೆನ್ಸಿಯಿಂದ ಪಡೆದುಕೊಂಡಿದ್ದಾನೆ. ದೂರುದಾರರಿಂದ ₹1000 ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆ ಬೀಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.   

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು