ನವದೆಹಲಿ: ಭವಿಷ್ಯದ ಹವಾಮಾನ ಬದಲಾವಣೆಯಿಂದ ಉಷ್ಣವಲಯದ ಮಳೆಗಾಲದ ಅವಧಿಯಲ್ಲಿ ಏರುಪೇರಾಗಲಿದ್ದು ಇದರಿಂದ ಭಾರತದ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ‘ ಎಂದು ಹೊಸ ಅಧ್ಯಯನವೊಂದು ಎಚ್ಚರಿಸಿದೆ.
ನೇಚರ್ ಕ್ಲೈಮೇಟ್ ಚೇಂಜ್ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು ಇದರಲ್ಲಿ ವಿವಿಧ ಹವಾಮಾನವಿರುವ 27 ಮಾದರಿಗಳನ್ನು ಕಂಪ್ಯೂಟರ್ ತಂತ್ರಾಂಶ(ಸಿಮ್ಯುಲೇಷನ್)ದಲ್ಲಿ ಪರಿಶೀಲಿಸಲಾಗಿದೆ. ನಂತರ ಈ ಶತಮಾನದ ಕೊನೆಯವರೆಗೂ ಉಂಟಾಗಬಹುದಾದ ಹಸಿರು ಮನೆ ಅನಿಲಗಳ ಪರಿಣಾಮದಿಂದಾಗಿ ಭವಿಷ್ಯದಲ್ಲಿ ಉಷ್ಣವಲಯದ ಮಳೆ ಬೀಳುವ ಪ್ರದೇಶದಲ್ಲಿ ಆಗುವ ವ್ಯತ್ಯಾಸಗಳನ್ನು ಗುರುತಿಸಲಾಗಿದೆ.
ಈ ಸಂಶೋಧನೆಯ ಪ್ರಕಾರ, ಪೂರ್ವ ಆಫ್ರಿಕಾ ಮತ್ತು ಹಿಂದೂ ಮಹಾಸಾಗರದ ಮೇಲೆ ಉಷ್ಣವಲಯದ ಮಳೆಗಾಲದ ಅವಧಿಯಲ್ಲಿ ಏರುಪೇರಾಗಲಿದೆ. ಇದು ‘ದಕ್ಷಿಣ ಭಾರತದಲ್ಲಿ ಪ್ರವಾಹ ತೀವ್ರಗೊಳ್ಳಲು‘ ಕಾರಣವಾಗಬಹುದು. ಜತೆಗೆ, 2100ರ ವೇಳೆಗೆ ಜಾಗತಿಕ ಜೀವವೈವಿಧ್ಯ ಮತ್ತು ಆಹಾರ ಸುರಕ್ಷತೆಯ ಮೇಲೂ ಪರಿಣಾಮ ಬೀರಬಹುದು.