ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ ಜಿಲ್ಲೆಯಲ್ಲಿ ಸೋಮವಾರ ಮೇಘಸ್ಫೋಟದಿಂದ ಮೂವರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲಿ ಬಿರುಗಾಳಿಯಿಂದಾಗಿ 3 ಡಜನ್ಗೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ.
ವರದಿಗಳ ಪ್ರಕಾರ, ಬಡ್ಗಾಮ್ನ ಚಂದಪೋರಾ ಗ್ರಾಮದ ಕಾರ್ಮಿಕರು ಕೆಲಸ ಮಾಡುತ್ತಿದ್ದ ಇಟ್ಟಿಗೆ ಗೂಡಿನ ಮೇಲೆ ಮೇಘಸ್ಫೋಟ ಸಂಭವಿಸಿದೆ.
ಕಾರ್ಮಿಕರನ್ನು ಬಡ್ಗಾಮ್ ಪಟ್ಟಣದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೊದಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಮೃತರನ್ನು ಉತ್ತರ ಪ್ರದೇಶದ ಬರೇಲಿ ನಿವಾಸಿಗಳಾದ ಸಲೀಂ ಮನ್ಸೂರಿ(45), ಕೈಸರ್ ಮನ್ಸೂರಿ(20), ಮತ್ತು ಮೊಹಮ್ಮದ್ ರಯೀಸ್(20) ಎಂದು ಗುರುತಿಸಲಾಗಿದೆ.
ಈ ಮಧ್ಯೆ, ಆಲಿಕಲ್ಲು ಮಳೆ ಜೊತೆ ಹೆಚ್ಚಿನ ವೇಗದ ಗಾಳಿಯಿಂದಾಗಿ ಕಣಿವೆಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.