ನವದೆಹಲಿ: ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ತಮ್ಮ ಅಧಿಕೃತ ಕರ್ತವ್ಯದ ಅವಧಿಯ ಬಳಿಕ ರೋಗಿಗಳಿಗೆ ಔಷಧ ನೀಡುವುದು ಅಥವಾ ದೂರವಾಣಿ ಸಮಾಲೋಚನೆ ಒದಗಿಸುವುದಕ್ಕೆ ಪೂರ್ವಾನುಮತಿ ಪಡೆಯುವ ಅಗತ್ಯ ಇಲ್ಲ. ಕೋವಿಡ್–19ರ ಕಾರಣದಿಂದ ವೈದ್ಯರ ಕೊರತೆ ಇದೆ ಮತ್ತು ರೋಗಿಗಳಿಗೆ ವೈದ್ಯರು ಸಿಗುತ್ತಿಲ್ಲ. ಈ ಕಾರಣಕ್ಕೆ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಆದೇಶ ಹೊರಡಿಸಿದೆ.