ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಶಶಿ ತರೂರ್ ಅವರು,‘ ಕೋವಿಡ್ನ ಎರಡನೇ ಅಲೆಯಿಂದಾಗಿ ಬ್ರಿಟನ್ ಪ್ರಧಾನಿ ಅವರು ಭಾರತ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇದರಿಂದಾಗಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳೇ ಇಲ್ಲ. ಹೀಗಿರುವಾಗ ಗಣರಾಜ್ಯೋತ್ಸವ ಕಾರ್ಯಕ್ರಮಗಳನ್ನು ರದ್ದುಗೊಳಿಸಬಾರದೇ’ ಎಂದು ಅವರು ಕೇಳಿದ್ದಾರೆ.