<p class="title"><strong>ನವದೆಹಲಿ</strong>: ‘ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಯುಇಟಿ) ಎಲ್ಲ ಪರೀಕ್ಷಾ ಮಂಡಳಿಗಳ ಅಭ್ಯರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸಲಿದೆ’ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.</p>.<p class="title">ಪರೀಕ್ಷೆಯನ್ನು ನಡೆಸುವ ಹೊಣೆ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ಟಿಎ) ಮುಂದಿನ ಶೈಕ್ಷಣಿಕ ಸಾಲಿನಿಂದ ವಾರ್ಷಿಕ ಎರಡು ಬಾರಿ ಸಿಯುಇಟಿ ನಡೆಸುವುದನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದರು.</p>.<p class="title">ಸಿಯುಇಟಿಯಿಂದ ಪರೀಕ್ಷಾ ಮಂಡಳಿಗಳ ಪರೀಕ್ಷೆಗಳು ಅಪ್ರಸ್ತುತವೂ ಆಗುವುದಿಲ್ಲ ಅಥವಾ ಇದು ಕೋಚಿಂಗ್ ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದೂ ಇಲ್ಲ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಪ್ರತಿಪಾದಿಸಿದರು.</p>.<p class="title">ಸಿಯುಇಟಿ ಅಂಕಗಳು ಭವಿಷ್ಯದಲ್ಲಿ ಕೇವಲ ಕೇಂದ್ರೀಯ ವಿ.ವಿ.ಗಳ ಪದವಿ ಕೋರ್ಸ್ಗಳಿಗೆ ಪ್ರವೇಶ ನೀಡುವುದಕ್ಕಷ್ಟೇ ಮಾನದಂಡ ಆಗುವುದಿಲ್ಲ. ಈ ಅಂಕಗಳನ್ನೇ ಪರಿಗಣಿಸಲು ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳೂ ಆಸಕ್ತಿ ತೋರಿವೆ ಎಂದರು.</p>.<p>ಟಾಟಾ ಸಮಾಜ ವಿಜ್ಞಾನ ಸಂಸ್ಥೆ (ಟಿಐಎಸ್ಎಸ್), ಜಾಮಿಯಾ ಹಮ್ದರ್ದ್ ಸೇರಿದಂತೆ ಎಂಟು ಡೀಮ್ಡ್ ವಿಶ್ವವಿದ್ಯಾಲಯಗಳೂ ತನ್ನ ಪದವಿ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸಲು ಸಿಯುಇಟಿ ಅಂಕ ಪರಿಗಣಿಸಲು ಆಸಕ್ತಿ ತೋರಿವೆ. ಯುಜಿಸಿಯಿಂದ ನಿರ್ವಹಣಾ ಅನುದಾನ ಪಡೆಯುವ ಈ ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ನಿರ್ದೇಶಕರ ಜೊತೆಗೆ ನಾನು ಚರ್ಚಿಸಿದ್ದೇನೆ ಎಂದರು.</p>.<p>ಸಿಯುಇಟಿ ಪರೀಕ್ಷೆಯು ಕೋಚಿಂಗ್ ಸಂಸ್ಕೃತಿಗೆ ಉತ್ತೇಜನ ನೀಡಲಿದೆಯೇ ಎಂಬ ಪ್ರಶ್ನೆಗೆ, ಈ ಪರೀಕ್ಷೆಗೆ ಕೋಚಿಂಗ್ ಅಗತ್ಯವಿಲ್ಲ. 12ನೇ ತರಗತಿ ಪಠ್ಯವನ್ನು ಆಧರಿಸಿಯೇ ಪರೀಕ್ಷೆ ನಡೆಯಲಿದೆ. ಅನೇಕ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯು 11ನೇ ತರಗತಿ ಪಠ್ಯವನ್ನು ಒಳಗೊಂಡಿರಲಿದೆ ಎಂಬ ಆತಂಕದಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಅಂತಹ ಆತಂಕ ಅನಗತ್ಯ ಎಂದು ಹೇಳಿದರು.</p>.<p>ಸುಮಾರು 45 ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸಲು ಇದೇ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಪ್ರವೇಶಕ್ಕೆ ಇನ್ನು 12ನೇ ತರಗತಿ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಈಚೆಗೆ ಪ್ರಕಟಿಸಲಾಗಿತ್ತು.</p>.<p>ಇದೇ ಮೊದಲ ಬಾರಿಗೆ ನಡೆಯಲಿರುವ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಏಪ್ರಿಲ್ 2ರಿಂದ ಆರಂಭವಾಗಲಿದೆ.</p>.<p><a href="https://www.prajavani.net/india-news/muzaffarnagar-tikait-starts-indefinite-protest-against-bku-activists-arrest-923762.html" itemprop="url">ರೈತ ಹೋರಾಟಗಾರರ ಬಂಧನ: ಪೊಲೀಸ್ ಠಾಣೆ ಎದುರು ರಾಕೇಶ್ ಟಿಕಾಯತ್ ಪ್ರತಿಭಟನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ‘ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಯುಇಟಿ) ಎಲ್ಲ ಪರೀಕ್ಷಾ ಮಂಡಳಿಗಳ ಅಭ್ಯರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸಲಿದೆ’ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.</p>.<p class="title">ಪರೀಕ್ಷೆಯನ್ನು ನಡೆಸುವ ಹೊಣೆ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ಟಿಎ) ಮುಂದಿನ ಶೈಕ್ಷಣಿಕ ಸಾಲಿನಿಂದ ವಾರ್ಷಿಕ ಎರಡು ಬಾರಿ ಸಿಯುಇಟಿ ನಡೆಸುವುದನ್ನು ಪರಿಶೀಲಿಸುತ್ತಿದೆ ಎಂದು ತಿಳಿಸಿದರು.</p>.<p class="title">ಸಿಯುಇಟಿಯಿಂದ ಪರೀಕ್ಷಾ ಮಂಡಳಿಗಳ ಪರೀಕ್ಷೆಗಳು ಅಪ್ರಸ್ತುತವೂ ಆಗುವುದಿಲ್ಲ ಅಥವಾ ಇದು ಕೋಚಿಂಗ್ ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದೂ ಇಲ್ಲ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಪ್ರತಿಪಾದಿಸಿದರು.</p>.<p class="title">ಸಿಯುಇಟಿ ಅಂಕಗಳು ಭವಿಷ್ಯದಲ್ಲಿ ಕೇವಲ ಕೇಂದ್ರೀಯ ವಿ.ವಿ.ಗಳ ಪದವಿ ಕೋರ್ಸ್ಗಳಿಗೆ ಪ್ರವೇಶ ನೀಡುವುದಕ್ಕಷ್ಟೇ ಮಾನದಂಡ ಆಗುವುದಿಲ್ಲ. ಈ ಅಂಕಗಳನ್ನೇ ಪರಿಗಣಿಸಲು ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳೂ ಆಸಕ್ತಿ ತೋರಿವೆ ಎಂದರು.</p>.<p>ಟಾಟಾ ಸಮಾಜ ವಿಜ್ಞಾನ ಸಂಸ್ಥೆ (ಟಿಐಎಸ್ಎಸ್), ಜಾಮಿಯಾ ಹಮ್ದರ್ದ್ ಸೇರಿದಂತೆ ಎಂಟು ಡೀಮ್ಡ್ ವಿಶ್ವವಿದ್ಯಾಲಯಗಳೂ ತನ್ನ ಪದವಿ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸಲು ಸಿಯುಇಟಿ ಅಂಕ ಪರಿಗಣಿಸಲು ಆಸಕ್ತಿ ತೋರಿವೆ. ಯುಜಿಸಿಯಿಂದ ನಿರ್ವಹಣಾ ಅನುದಾನ ಪಡೆಯುವ ಈ ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ನಿರ್ದೇಶಕರ ಜೊತೆಗೆ ನಾನು ಚರ್ಚಿಸಿದ್ದೇನೆ ಎಂದರು.</p>.<p>ಸಿಯುಇಟಿ ಪರೀಕ್ಷೆಯು ಕೋಚಿಂಗ್ ಸಂಸ್ಕೃತಿಗೆ ಉತ್ತೇಜನ ನೀಡಲಿದೆಯೇ ಎಂಬ ಪ್ರಶ್ನೆಗೆ, ಈ ಪರೀಕ್ಷೆಗೆ ಕೋಚಿಂಗ್ ಅಗತ್ಯವಿಲ್ಲ. 12ನೇ ತರಗತಿ ಪಠ್ಯವನ್ನು ಆಧರಿಸಿಯೇ ಪರೀಕ್ಷೆ ನಡೆಯಲಿದೆ. ಅನೇಕ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯು 11ನೇ ತರಗತಿ ಪಠ್ಯವನ್ನು ಒಳಗೊಂಡಿರಲಿದೆ ಎಂಬ ಆತಂಕದಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಅಂತಹ ಆತಂಕ ಅನಗತ್ಯ ಎಂದು ಹೇಳಿದರು.</p>.<p>ಸುಮಾರು 45 ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸಲು ಇದೇ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಪ್ರವೇಶಕ್ಕೆ ಇನ್ನು 12ನೇ ತರಗತಿ ಅಂಕಗಳನ್ನು ಪರಿಗಣಿಸುವುದಿಲ್ಲ ಎಂದು ಈಚೆಗೆ ಪ್ರಕಟಿಸಲಾಗಿತ್ತು.</p>.<p>ಇದೇ ಮೊದಲ ಬಾರಿಗೆ ನಡೆಯಲಿರುವ ಸಿಯುಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಏಪ್ರಿಲ್ 2ರಿಂದ ಆರಂಭವಾಗಲಿದೆ.</p>.<p><a href="https://www.prajavani.net/india-news/muzaffarnagar-tikait-starts-indefinite-protest-against-bku-activists-arrest-923762.html" itemprop="url">ರೈತ ಹೋರಾಟಗಾರರ ಬಂಧನ: ಪೊಲೀಸ್ ಠಾಣೆ ಎದುರು ರಾಕೇಶ್ ಟಿಕಾಯತ್ ಪ್ರತಿಭಟನೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>