ಬಾಲಕಿಯ ಪೋಷಕರ ಪ್ರಕಾರ, ನೈಋತ್ಯ ದೆಹಲಿ ಹಳೆಯ ನಂಗಲ್ ಪ್ರದೇಶದಲ್ಲಿ ಅವರ ಮನೆಯ ಎದುರಿನ ಸ್ಮಶಾನದಲ್ಲಿ ಕೂಲರ್ನಿಂದ ತಣ್ಣೀರು ತರಲೆಂದು ಆಗಸ್ಟ್ 1 ರಂದು ಸಂಜೆ 5.30 ರ ಸುಮಾರಿಗೆ ಬಾಲಕಿ ಹೊರಗೆ ಹೋಗಿದ್ದಳು. ಸಂಜೆ 6ಗಂಟೆ ಸುಮಾರಿಗೆ ಸ್ಮಶಾನದ ಸಿಬ್ಬಂದಿ ರಾಧೇ ಶ್ಯಾಂ ಮತ್ತು ಇನ್ನಿಬ್ಬರು ಬಾಲಕಿಯ ತಾಯಿಯನ್ನು ಸ್ಥಳಕ್ಕೆ ಕರೆದಿದ್ದಾರೆ. ಬಾಲಕಿಯ ದೇಹವನ್ನು ತಾಯಿಗೆ ತೋರಿಸಿ, ಕೂಲರ್ನಿಂದ ನೀರು ಪಡೆಯುವಾಗ ಆಕೆಗೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.