ಈ ಕುರಿತು ನವದೆಹಲಿಯಲ್ಲಿ ಸೋಮವಾರ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾಅವರು, ‘ದೆಹಲಿ ನಾಯಕತ್ವದ ನಿರಂಕುಶಾಧಿಕಾರಕ್ಕೆ ಕರ್ನಾಟಕದಲ್ಲಿ ಯಡಿಯೂರಪ್ಪನವರ ತಲೆದಂಡವಾಗಿದೆ. ಇದು ಪ್ರಧಾನಿ ಮೋದಿ ಅವರು ಬಲವಂತವಾಗಿ ಬಿಜೆಪಿ ಹಿರಿಯ ನಾಯಕರಿಗೆ ನಿವೃತ್ತಿ ನೀಡುತ್ತಿರುವುದಕ್ಕೆ ಹೊಸ ಸೇರ್ಪಡೆ‘ ಎಂದಿದ್ದಾರೆ.