ರಾಜ್ಯದ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲಾಗುವುದು. ಇದಕ್ಕಾಗಿ ಪ್ರದೇಶಗಳನ್ನು ಗುರುತಿಸಲಾಗಿದೆ. ರಾಜ್ಯದ ಐತಿಹಾಸಿಕ ಅಂತಾರಾಷ್ಟ್ರೀಯ ಗಡಿಗಳನ್ನು ಮತ್ತು ರಾಜ್ಯದ ಆಂತರಿಕ ಗಡಿಗಳನ್ನು ಕಾಪಾಡಲು ಗಮನ ನೀಡಲಾಗುವುದು. ರಾಜ್ಯದ ಅರಣ್ಯ ಪ್ರದೇಶ, ರಾಷ್ಟ್ರೀಯ ಅಭಯಾರಣ್ಯಗಳು, ವನ್ಯಮೃಗ ಧಾಮಗಳು ಮತ್ತು ಜೈವಿಕ ವೈವಿಧ್ಯ ಹೊಂದಿರುವ ಪ್ರದೇಶಗಳನ್ನು ಸಂರಕ್ಷಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.