‘ರಾಷ್ಟ್ರೀಯ ಹಸಿರು ನ್ಯಾಯಪೀಠವನ್ನು ಸಹ ದುರ್ಬಲಗೊಳಿಸಲಾಗಿದೆ. ಪರಿಸರ ಸಂರಕ್ಷಣೆ ವಿಚಾರದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನೂ ಇಐಎ ಕಡಿಮೆ ಮಾಡಲಿದೆ. ಎಲ್ಲಿಯಾದರು ಪರಿಸರ ಕಾನೂನುಗಳ ಉಲ್ಲಂಘನೆ ನಡೆಯುತ್ತಿರುವುದು ಕಂಡು ಬಂದರೂ, ಸ್ಥಳೀಯ ಸಮುದಾಯಗಳು, ಎನ್ಜಿಒಗಳು, ಯಾವುದೇ ಸಂಘಟನೆಗಳು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲು ಇನ್ನು ಮುಂದೆ ಅವಕಾಶ ಇರುವುದಿಲ್ಲ’ ಎಂದು ಹೇಳಿದರು.