ಅಮರಾವತಿ: ‘ಇಬ್ಭಾಗದ ನಂತರ ಆಂಧ್ರಪ್ರದೇಶವು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರವು ಈ ರಾಜ್ಯಕ್ಕೆ ಹೆಚ್ಚಿನ ಹಣಕಾಸಿನ ನೆರವು ಒದಗಿಸಬೇಕು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಶನಿವಾರ ಹೇಳಿದ್ದಾರೆ.
ವಿಜಯವಾಡದಲ್ಲಿ ನ್ಯಾಯಾಲಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದ ಅವರು,‘ಆಂಧ್ರ ಹಾಗೂ ತೆಲಂಗಾಣ ಇಬ್ಭಾಗವಾದ ಬಳಿಕ ಆಂಧ್ರವು ಆರ್ಥಿಕವಾಗಿ ಹಿಂದುಳಿದಿದೆ ಎಂಬ ಭಾವನೆ ಸ್ಥಳೀಯರಲ್ಲಿದೆ. ಹೀಗಾಗಿ ಕೇಂದ್ರವು ನೆರವು ಪ್ರಕಟಿಸಬೇಕು’ ಎಂದಿದ್ದಾರೆ.