ಪ್ರಸಿದ್ಧ ಉರ್ದು ಸಾಹಿತಿ ರಾಹತ್ ಇಂದೋರಿಯವರ ಶಾಯಿರಿಯೊಂದಿಗೆ ಟ್ವೀಟ್ ಅನ್ನು ಪ್ರಾರಂಭಿಸಿರುವ ಅವರು, ‘ಇಂದು ಅಧಿಕಾರದ ಗದ್ದುಗೆಯಲ್ಲಿ ಇರುವವರು ನಾಳೆ ಇರುವುದಿಲ್ಲ. ಎಲ್ಲರಿಗೂ ಧನ್ಯವಾದಗಳು. ಕಳೆದ ಒಂದು ತಿಂಗಳಲ್ಲಿ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಇರುವ ಹಿತೈಷಿಗಳಿಂದ ನಾನು ಅಪಾರ ಬೆಂಬಲವನ್ನು ಪಡೆದಿದ್ದೇನೆ. ನಿಮಗೆಲ್ಲ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ಬೆಂಬಲ ನನಗೆ ಮತ್ತು ನನ್ನ ಕುಟುಂಬಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದೆ’ ಎಂದು ತಿಳಿಸಿದ್ದಾರೆ.