ಪಂಜಾಬ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ, ರಾಜಸ್ಥಾನದಿಂದ ಟ್ರ್ಯಾಕ್ಟರ್ ಮುಖಾಂತರ ಸಾವಿರಾರು ರೈತರು ಹೊರಟಿದ್ದು, ಗುರುವಾರ ದೆಹಲಿ ತಲುಪಲಿದ್ದಾರೆ. ಅವರನ್ನು ದಾರಿ ಮಧ್ಯೆಯೇ ತಡೆದರೆ ಅಲ್ಲಿಯೇ ಅನಿರ್ಧಿಷ್ಟಾವಧಿ ಧರಣಿ ನಡೆಸಲಿದ್ದಾರೆ ಎಂದು ಕ್ರಾಂತಿಕಾರಿ ಕಿಸಾನ್ ಸಂಘದ ಅಧ್ಯಕ್ಷ ದರ್ಶನ್ ಪಾಲ್ ಸಿಂಗ್ ತಿಳಿಸಿದರು. ರೈತರು ದೆಹಲಿ ತಲುಪದೇ ಇರಲು ಪಂಜಾಬ್ ಜೊತೆಗಿನ ಗಡಿಯನ್ನು ಹರಿಯಾಣ ರಾಜ್ಯ ಸರ್ಕಾರ ಮುಚ್ಚಿದೆ. ದೆಹಲಿಗೆ ತೆರಳುವ ಎಲ್ಲ 9 ಗಡಿಯ ಮುಖಾಂತರ ನಾವು ಪ್ರವೇಶಿಸಲಿದ್ದು, ತಡೆದರೆ ಅಲ್ಲಿಯೇ ಪ್ರತಿಭಟನೆ ನಡೆಸುವುದಾಗಿ ಸಿಂಗ್ ತಿಳಿಸಿದರು.