ನಗರಕರ್ನೂಲ್ (ತೆಲಂಗಾಣ): ನಗರಕರ್ನೂಲ್ ಜಿಲ್ಲೆಯ ಡೊಮಲಪೆಂಟಾ ಹತ್ತಿರದ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಕಾಳ್ಗಿಚ್ಚು ಸಂಭವಿಸಿದೆ.
ಜಿಲ್ಲಾ ಅರಣ್ಯಾಧಿಕಾರಿ ಕೃಷ್ಣ ಗೌಡ್ ಅವರು ಈ ಸಂಬಂಧ ಮಾಹಿತಿ ನೀಡಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.
ʼಅರಣ್ಯಾಧಿಕಾರಿಗಳಿಗೆ ರಾತ್ರಿ 11.30ಕ್ಕೆ ವಿಚಾರ ತಿಳಿದ ಕೂಡಲೇ10 ಅಗ್ನಿಶಾಮಕ ಸಿಬ್ಬಂದಿಯನ್ನೊಳಗೊಂಡ ಎರಡು ತಂಡ ಸ್ಥಳಕ್ಕೆ ಧಾವಿಸಿದವು. ಬೆಂಕಿ ನಂದಿಸುವ ಕಾರ್ಯ ತಡರಾತ್ರಿ 2.30 ರವರೆಗೂನಡೆಯಿತು. ಒಣ ಹುಲ್ಲಿನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ನಷ್ಟ ಸಂಭವಿಸಿದೆʼ ಎಂದು ಹೇಳಿದ್ದಾರೆ.