ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರ ಅರಣ್ಯದಲ್ಲಿ ಉಗ್ರರು; 15ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ

Last Updated 25 ಅಕ್ಟೋಬರ್ 2021, 12:21 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಾದ ಪೂಂಚ್‌ ಮತ್ತು ರಾಜೌರಿಯ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿರುವ ಉಗ್ರರ ಪತ್ತೆಗೆ ನಡೆಯುತ್ತಿರುವ ಕಾರ್ಯಾಚರಣೆ 15ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʼಭಟ್ಟಿ ದುರೈನ್‌ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಉಗ್ರರು ಮತ್ತೆ ಮುಖಾಮುಖಿಯಾಗಿ ಗುಂಡಿನ ದಾಳಿನಡೆಸಲಾಗಿದೆಯೇ ಎಂಬುದು ಸದ್ಯ ಸ್ಪಷ್ಟವಾಗಿಲ್ಲ.ಉಗ್ರರು ದಟ್ಟಾರಣ್ಯದಲ್ಲಿನ ಗುಹೆಗಳಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆ ಇದೆʼ ಎಂದು ಹೇಳಿದ್ದಾರೆ.

ಅಕ್ಟೋಬರ್‌11ರಂದು ಕಾರ್ಯಾಚರಣೆ ಆರಂಭವಾದಾಗಿನಿಂದಅಧಿಕಾರಿಗಳಿಬ್ಬರು ಸೇರಿದಂತೆ ಭಾರತೀಯ ಸೇನೆಯ 9 ಸಿಬ್ಬಂದಿ ಹುತಾತ್ಮರಾಗಿದ್ದಾರೆ.ಪಾಕಿಸ್ತಾನ ಮೂಲದ ಬಂಧಿತ ಉಗ್ರನೊಬ್ಬನೂ ಮೃತಪಟ್ಟಿದ್ದಾನೆ.

ಪೂಂಚ್‌ನ ಸುರನ್‌ಕೋಟ್ ಅರಣ್ಯದಲ್ಲಿ ನಡೆದ ಮೊದಲ ದಿನದ ಕಾರ್ಯಾಚರಣೆ ವೇಳೆ ಐವರು ಮತ್ತು ಮೆಂಧಾರ್‌ನ ಭಟ್ಟಿ ದುರೈನ್‌ನಲ್ಲಿಅಕ್ಟೋಬರ್‌ 14ರಂದು ನಡೆದ ಕಾರ್ಯಾಚರಣೆ ವೇಳೆ ನಾಲ್ವರು ಯೋಧರು ಮೃತಪಟ್ಟಿದ್ದಾರೆ.

ಕಾರ್ಯಾಚರಣೆ ವೇಳೆ ನಡೆದಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಉಗ್ರನನ್ನು ವಿಚಾರಣೆ ಸಲುವಾಗಿ ಜಮ್ಮುವಿನ ಕೋಟ್‌ ಭಲ್ವಾಲ್‌ ಸೆಂಟ್ರಲ್‌ ಜೈಲಿನಿಂದ ಮೆಂಧಾರ್‌ ಪೊಲೀಸ್‌ ರಿಮ್ಯಾಂಡ್‌ಗೆ ಕರೆದೊಯ್ಯುವ‌ ವೇಳೆ ಮೃತಪಟ್ಟಿದ್ದಾನೆ.

ಸುರನ್‌ಕೋಟ್‌ ಮತ್ತು ಮೆಂಧಾರ್‌ಜೊತೆಗೆ ರಾಜೌರಿ ಜಿಲ್ಲೆಯ ಥಾನಮಂಡಿ ಅರಣ್ಯದಲ್ಲಿಯೂ ಕಾರ್ಯಾಚರಣೆ ಮುಂದುವರಿದಿದೆ.ಉಗ್ರರು ತಪ್ಪಿಸಿಕೊಳ್ಳದಂತೆಖಚಿತಪಡಿಸಿಕೊಳ್ಳಲು ಡ್ರೋಣ್‌ ಕಣ್ಗಾವಲು ಇಡಲಾಗಿದೆ.

ಉಗ್ರರಿಗೆ ಆಹಾರ, ಆಶ್ರಯಸೇರಿದಂತೆ ವ್ಯವಸ್ಥಿತ ನೆರವು ನೀಡಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿ ಒಟ್ಟು ಹನ್ನೆರಡು ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಕಾರ್ಯಾಚರಣೆ ಹಿನ್ನಲೆಯಲ್ಲಿಮುನ್ನೆಚ್ಚರಿಕೆಯಾಗಿಮೆಂಧಾರ್‌ ಮತ್ತು ಥಾನಮಂಡಿ ನಡುವಿನ ಜಮ್ಮು-ರಾಜೌರಿ ಹೆದ್ದಾರಿಯಲ್ಲಿ ಹತ್ತನೇ ದಿನವೂ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

‌ಜಮ್ಮು ಪ್ರದೇಶದ ರಾಜೌರಿ ಮತ್ತು ಪೂಂಚ್‌,ಈ ವರ್ಷದ ಜೂನ್‌ನಿಂದ ಅತಿ ಹೆಚ್ಚು ನುಸುಳುವಿಕೆ ಪ್ರಕರಣಗಳಿಗೆ ಸಾಕ್ಷಿಯಾಗಿವೆ. ಇದರ ಪರಿಣಾಮವಾಗಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ 9 ಉಗ್ರರು ಹತ್ಯೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT