ಜಿಲ್ಲೆಯ ನವಾಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಖಗಲ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಹುಲ್ (42), ರಾಹುಲ್ ಪತ್ನಿ ಪ್ರಿತಿ (38), ಪುತ್ರಿಯರಾದ ಮಹಿ (15), ಪಿಹು (13) ಮತ್ತು ಕುಹು (11) ಮೃತಪಟ್ಟವರು. ಅಖಿಲೇಶ್ ಯಾದವ್ ಟೀಕೆಗೆ ಪ್ರತಿಕ್ರಿಯಿಸಿರುವಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಅಗರವಾಲ್, ಕುಟುಂಬದ ಯಜಮಾನ ಇತರರನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದು ಎಂದು ಹೇಳಿದ್ದಾರೆ.