ನವದೆಹಲಿ: ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಜಗಮೋಹನ್ ಮಲ್ಹೋತ್ರಾ ಅವರು ಅನಾರೋಗ್ಯದ ಕಾರಣದಿಂದ ಇಂದು ದೆಹಲಿಯಲ್ಲಿ ನಿಧನರಾಗಿದ್ದಾರೆ. ಅವರಿಗೆ94 ವರ್ಷ ವಯಸ್ಸಾಗಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಗಮೋಹನ್ ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದಿದ್ದಾರೆ.
ʼಜಗಮೋಹನ್ ಅವರ ನಿಧನವು ದೇಶಕ್ಕೆ ದೊಡ್ಡ ನಷ್ಟವಾಗಿದೆ. ಅವರು ಮಾದರಿ ಆಡಳಿತಗಾರ ಮತ್ತು ಮೇಧಾವಿಯಾಗಿದ್ದರು. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವುದಕ್ಕಾಗಿ ಸದಾ ಶ್ರಮಿಸುತ್ತಿದ್ದರು. ಅವರ ಅಧಿಕಾರಾವಧಿಯನ್ನು ಹೊಸ ನೀತಿಗಳ ಮೂಲಕ ಗುರುತಿಸಬಹುದಾಗಿದೆ. ಕುಟುಂಬ ಹಾಗೂ ಬೆಂಬಲಿಗರಿಗೆ ಸಂತಾಪಗಳು. ಓಂ ಶಾಂತಿʼ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Jagmohan Ji’s demise is a monumental loss for our nation. He was an exemplary administrator and a renowned scholar. He always worked towards the betterment of India. His ministerial tenure was marked by innovative policy making. Condolences to his family and admirers. Om Shanti.
1927 ಸೆಪ್ಟೆಂಬರ್ 25ರಂದು ಜನಿಸಿದಜಗಮೋಹನ್,1996ರಲ್ಲಿ ಮೊದಲ ಸಲಸಂಸದರಾಗಿಆಯ್ಕೆಯಾಗಿದ್ದರು.ಜಮ್ಮು ಕಾಶ್ಮೀರ, ಗೋವಾದ ರಾಜ್ಯಪಾಲರಾಗಿಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿಯೂ ಕಾರ್ಯನಿರ್ವಹಿಸಿದ್ದರು.
ಅವರಿಗೆಪದ್ಮಶ್ರೀ (1971), ಪದ್ಮಭೂಷಣ (1977) ಮತ್ತು ಪದ್ಮ ವಿಭೂಷಣ(2016) ಗೌರವಗಳು ಸಂದಿವೆ.