ದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಲೋಧಿ ರಸ್ತೆ ವಿದ್ಯುತ್ ಚಿತಾಗಾರದಲ್ಲಿಮಂಗಳವಾರ ನೆರವೇರಿತು.
ಪ್ರಣವ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಅವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.
ಕೋವಿಡ್ ಶಿಷ್ಟಾಚಾರದ ಕಾರಣದಿಂದಾಗಿ ಮುಖರ್ಜಿ ಸಂಬಂಧಿಕರು ವೈಯಕ್ತಿಕ ರಕ್ಷಣಾ ಕವಚ (ಪಿಪಿಇ ಕಿಟ್) ಧರಿಸಿಯೇ ಅಂತಿಮ ನಮನ ಸಲ್ಲಿಸಬೇಕಾಯಿತು.
#WATCH Delhi: The mortal remains of former President #PranabMukherjee brought to Lodhi Crematorium.
He had tested positive for #COVID19 and had undergone surgery for a brain clot at Army (R&R) Hospital on August 10, where he passed away yesterday. pic.twitter.com/24h4hHxZ2L
ಮಾಜಿ ರಾಷ್ಟ್ರಪತಿಗೆ ಸೇನೆಯ ತುಕಡಿಯು ಗುಂಡು ಹಾರಿಸುವ ಮೂಲಕ ನಮನ ಸಲ್ಲಿಸಿತು.
ಮಿದುಳು ಶಸ್ತ್ರಚಿಕಿತ್ಸೆ, ಕೋವಿಡ್–19, ಶ್ವಾಸಕೋಶದ ಸೋಂಕು ಸೇರಿದಂತೆ ಹಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಕಳೆದ 21 ದಿನಗಳಿಂದ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣವ್ ಮುಖರ್ಜಿ (84) ಸೋಮವಾರ ಸಂಜೆ ಇಹಲೋಕ ತ್ಯಜಿಸಿದರು.