ಕೋಲ್ಕತ್ತ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರ, ಕಾಂಗ್ರೆಸ್ನ ಮಾಜಿ ಸಂಸದ ಅಭಿಜಿತ್ ಮುಖರ್ಜಿ ಅವರು ಸೋಮವಾರ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪಶ್ಚಿಮ ಬಂಗಾಳದ ಜಂಗೀಪುರ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ಅವರು, ಟಿಎಂಸಿ ಮುಖಂಡರ ಜೊತೆ ಸಂಪರ್ಕದಲ್ಲಿದ್ದರು. ಟಿಎಂಸಿ ಮುಖಂಡ ಸುದೀಪ್ ಬಂಡೋಪಾಧ್ಯಾಯ ಅವರು ಅಭಿಜಿತ್ ಅವರನ್ನು ಬರಮಾಡಿಕೊಂಡರು.
‘ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವಲ್ಲಿ ದೀದಿ ಯಶಸ್ವಿಯಾಗಿದ್ದಾರೆ. ಅವರು ಅತ್ಯಂತ ವಿಶ್ವಾಸಾರ್ಹ ಜಾತ್ಯತೀತ ನಾಯಕಿ. ಭವಿಷ್ಯದ್ಲಿ ದೇಶದಾದ್ಯಂತ ಬಿಜೆಪಿಯನ್ನು ತಡೆಯುವ ವಿಶ್ವಾಸ ತಮಗಿದೆ‘ ಎಂದು ಅಭಿಜಿತ್ ಪ್ರತಿಕ್ರಿಯಿಸಿದರು.
‘ನನಗೆ ಯಾವುದೇ ಸ್ಥಾನದ ಆಕಾಂಕ್ಷೆ ಇಲ್ಲ. ಕೆಳಹಂತದ ಕಾರ್ಯಕರ್ತನಾಗಿ ಇರುತ್ತೇನೆ. ಕಾಂಗ್ರೆಸ್ನಲ್ಲಿಯೂ ನನಗೆ ಯಾವುದೇ ಸ್ಥಾನ ಇರಲಿಲ್ಲ’ ಎಂದರು.