2003ರಲ್ಲಿ ಜೈಲಿನಲ್ಲಿದ್ದ ಅನ್ಸಾರಿ ಭೇಟಿಗೆ ಬಂದಿದ್ದ ಜನರನ್ನು ತಪಾಸಣೆ ನಡೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ನನಗೆ ಬೆದರಿಕೆ ಹಾಕಲಾಗಿದೆ ಎಂದು ಜೈಲು ಅಧಿಕಾರಿ ಎಸ್.ಕೆ. ಅಶ್ವಥಿ ಅವರು, ಅಲಂಬಾಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಲ್ಲದೆ, ಅನ್ಸಾರಿ ನನಗೆ ಪಿಸ್ತೂಲ್ ಸಹ ತೋರಿಸಿದ್ದರು ಎಂದು ಅಶ್ವಥಿ ಆರೋಪಿಸಿದ್ದರು.
ವಿಚಾರಣಾ ನ್ಯಾಯಾಲಯವು ಅನ್ಸಾರಿ ಅವರನ್ನು ಖುಲಾಸೆಗೊಳಿಸಿತ್ತು. ಆದರೆ, ಉತ್ತರ ಪ್ರದೇಶ ಸರ್ಕಾರವು ಹೈಕೋರ್ಟ್ ಆದೆಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.