ಇಲ್ಲಿ ನಡೆದ ಮಾತೃಭೂಮಿ ಇಂಟರ್ನ್ಯಾಷನಲ್ ಫೆಸ್ಟಿವಲ್ ಆಫ್ ಲೆಟರ್ಸ್ (ಎಂಬಿಐಎಫ್ಎಲ್ 2023) ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಅವರು ಹೀಗೆ ಹೇಳಿದರು. ‘ಭಿನ್ನಮತ ಹತ್ತಿಕ್ಕುವ ಕೆಲಸವನ್ನು ನಾವು ದೇಶದ ಎಲ್ಲೆಡೆ ನೋಡುತ್ತಿದ್ದೇವೆ. ಅಧಿಕಾರ ಕೇಂದ್ರಗಳೂ ಇದಕ್ಕೆ ಹೊರತಾಗಿಲ್ಲ. ಭಾರತದಲ್ಲಿ ಅಸಹಿಷ್ಣತೆ ಮತ್ತು ಹಿಂಸಾಚಾರದಿಂದ ಉಂಟಾಗಿರುವ ಸವಾಲುಗಳ ಜೊತೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖಾಮುಖಿಯಾಗಿದೆ. ಸ್ವತಂತ್ರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ನಾವು ಮೌನವಹಿಸಿದರೆ, ಆರಂಭಿಕ ಸೂಚನೆಯಂತೆ ಕಂಡಿರುವ ಸಮಸ್ಯೆಯು ಮುಂದೆ ನಮ್ಮನ್ನು ಗಂಭೀರ ಸಮಸ್ಯೆಗೆ ದೂಡುತ್ತದೆ’ ಎಂದು ಅವರು ಹೇಳಿದರು.