<p>ನವದೆಹಲಿ: ‘ಪ್ರಬಲ ಜಿ–20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಳ್ಳುತ್ತಿದೆ. ದೇಶವು ಈ ಅವಧಿಯಲ್ಲಿ ಶಾಂತಿ ಸ್ಥಾಪನೆ, ಏಕತೆ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ಸೇರಿದಂತೆ ಜಗತ್ತಿನ ಒಳಿತಿಗಾಗಿ ಈ ಅವಕಾಶ ಬಳಸಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.</p>.<p>ಭಾರತ, ಜಿ–20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಡಿಸೆಂಬರ್ 1ರಂದು ವಹಿಸಿಕೊಳ್ಳಲಿದೆ.</p>.<p>ಮಾಸಿಕ ‘ಮನ್ ಕಿ ಬಾತ್’ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ತನ್ನ ಅಧ್ಯಕ್ಷೀಯ ಅವಧಿಗಾಗಿ ಭಾರತವು ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ ಎಂಬ ಧ್ಯೇಯವಾಕ್ಯವನ್ನು ಘೋಷಿಸಿದೆ. ಇದು ‘ವಸುಧೈವ ಕುಟುಂಬಕಂ’ ಎಂಬ ತತ್ವಕ್ಕೆ ದೇಶವು ಹೊಂದಿರುವ ಬದ್ಧತೆಯನ್ನು ತೋರುತ್ತದೆ’ ಎಂದರು.</p>.<p>‘ಜಿ–20 ಗುಂಪಿನ ವ್ಯಾಪ್ತಿ ಅಗಾಧ. ಜಗತ್ತಿನ ಜನಸಂಖ್ಯೆಯ ಮೂರನೇ ಎರಡರಷ್ಟು ಪ್ರಮಾಣವನ್ನು ಈ ಗುಂಪು ಒಳಗೊಂಡಿದೆ. ವಿಶ್ವ ವ್ಯಾಪಾರದಲ್ಲಿ ಈ ಗುಂಪಿನ ಸದಸ್ಯ ರಾಷ್ಟ್ರಗಳ ಪಾಲು ಶೇ 75ರಷ್ಟಿದ್ದರೆ, ಜಾಗತಿಕ ಜಿಡಿಪಿಯಲ್ಲಿ ಶೇ 85ರಷ್ಟು ಪಾಲು ಹೊಂದಿದೆ. ಹೀಗಾಗಿ, ಇಂಥ ಬೃಹತ್ ಸಂಘಟನೆಯ ಅಧ್ಯಕ್ಷ ಸ್ಥಾನವನ್ನು ಡಿ.1ರಿಂದ ಭಾರತ ವಹಿಸಿಕೊಳ್ಳುತ್ತದೆ’ ಎಂದು ಅವರು ವಿವರಿಸಿದರು.</p>.<p>‘ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ಭಾರತಕ್ಕೆ ಇಂಥ ಅದ್ಭುತ ಅವಕಾಶ ಲಭಿಸಿದೆ. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಉತ್ತಮ ಅವಕಾಶ ಒದಗಿಸಿದೆ’ ಎಂದು ಹೇಳಿದರು.</p>.<p>ಸಾಧನೆ–ಸಾಧಕರ ಪ್ರಸ್ತಾಪ: ತೆಲಂಗಾಣದ ನೇಕಾರ ಹರಿಪ್ರಸಾದ್ ಎಂಬುವವರು ಸ್ವತಃ ನೇಯ್ದಿದ್ದ ‘ಜಿ–20’ ಲಾಂಛನವನ್ನು ತಮಗೆ ನೀಡಿದ್ದನ್ನು ಮೋದಿ ಪ್ರಸ್ತಾಪಿಸಿ, ಅವರಿಗೆ ಧನ್ಯವಾದ ತಿಳಿಸಿದರು.</p>.<p>‘ವಿಕ್ರಮ್–ಎಸ್’ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್ಅಪ್ನ ಸಾಧನೆಯನ್ನು ಹೊಗಳಿದ ಅವರು, ಈ ಸಾಧನೆ ಪ್ರತಿಯೊಬ್ಬ ಭಾರತೀಯನ ಪಾಲಿಗೆ ಹೆಮ್ಮೆಯ ವಿಷಯ’ ಎಂದರು.</p>.<p>ಹಿಮಾಚಲಪ್ರದೇಶದ ಕಿನ್ನೌರ್ನಲ್ಲಿ ಡ್ರೋನ್ಗಳನ್ನು ಬಳಸಿ ಸೇಬು ಹಣ್ಣುಗಳನ್ನು ಸಾಗಾಟ ಮಾಡುತ್ತಿರುವುದು, ನಾಗಾ ಸಮುದಾಯದವರು ತಮ್ಮ ಕಲೆ, ಸಂಸ್ಕೃತಿ ಹಾಗೂ ಸಂಗೀತವನ್ನು ಕಾಪಾಡಿಕೊಂಡಿರುವುದನ್ನು ಪ್ರಸ್ತಾಪಿಸಿದರು.</p>.<p><strong>ಚೀನಾದೊಂದಿಗೆ ವ್ಯವಹರಿಸುವುದು ಸವಾಲಿನ ಕೆಲಸ: ಸರನ್</strong></p>.<p>‘ಜಿ–20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರುವ ಭಾರತಕ್ಕೆ, ಈ ಅವಧಿಯಲ್ಲಿ ನೆರೆಯ ಚೀನಾದೊಂದಿಗೆ ವ್ಯವಹರಿಸುವುದು ಸವಾಲಿನ ಕೆಲಸವಾಗಲಿದೆ’ ಎಂದು ಮಾಜಿ ಡೆಪ್ಯುಟಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಂಕಜ್ ಸರನ್ ಭಾನುವಾರ ಹೇಳಿದ್ದಾರೆ.</p>.<p>ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>‘ದೇಶವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ಚೀನಾ ಮಾನ್ಯ ಮಾಡಬೇಕು. ಅಲ್ಲದೇ, ಆ ಸ್ಥಾನಕ್ಕೆ ತಕ್ಕಂತೆ ಚೀನಾ ತನ್ನೊಂದಿಗೆ ವ್ಯವಹರಿಸಬೇಕು ಎಂಬುದಾಗಿ ಭಾರತ ನಿರೀಕ್ಷಿಸುತ್ತದೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ‘ಪ್ರಬಲ ಜಿ–20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಭಾರತ ವಹಿಸಿಕೊಳ್ಳುತ್ತಿದೆ. ದೇಶವು ಈ ಅವಧಿಯಲ್ಲಿ ಶಾಂತಿ ಸ್ಥಾಪನೆ, ಏಕತೆ, ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿ ಸೇರಿದಂತೆ ಜಗತ್ತಿನ ಒಳಿತಿಗಾಗಿ ಈ ಅವಕಾಶ ಬಳಸಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.</p>.<p>ಭಾರತ, ಜಿ–20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಅಧಿಕೃತವಾಗಿ ಡಿಸೆಂಬರ್ 1ರಂದು ವಹಿಸಿಕೊಳ್ಳಲಿದೆ.</p>.<p>ಮಾಸಿಕ ‘ಮನ್ ಕಿ ಬಾತ್’ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ತನ್ನ ಅಧ್ಯಕ್ಷೀಯ ಅವಧಿಗಾಗಿ ಭಾರತವು ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ ಎಂಬ ಧ್ಯೇಯವಾಕ್ಯವನ್ನು ಘೋಷಿಸಿದೆ. ಇದು ‘ವಸುಧೈವ ಕುಟುಂಬಕಂ’ ಎಂಬ ತತ್ವಕ್ಕೆ ದೇಶವು ಹೊಂದಿರುವ ಬದ್ಧತೆಯನ್ನು ತೋರುತ್ತದೆ’ ಎಂದರು.</p>.<p>‘ಜಿ–20 ಗುಂಪಿನ ವ್ಯಾಪ್ತಿ ಅಗಾಧ. ಜಗತ್ತಿನ ಜನಸಂಖ್ಯೆಯ ಮೂರನೇ ಎರಡರಷ್ಟು ಪ್ರಮಾಣವನ್ನು ಈ ಗುಂಪು ಒಳಗೊಂಡಿದೆ. ವಿಶ್ವ ವ್ಯಾಪಾರದಲ್ಲಿ ಈ ಗುಂಪಿನ ಸದಸ್ಯ ರಾಷ್ಟ್ರಗಳ ಪಾಲು ಶೇ 75ರಷ್ಟಿದ್ದರೆ, ಜಾಗತಿಕ ಜಿಡಿಪಿಯಲ್ಲಿ ಶೇ 85ರಷ್ಟು ಪಾಲು ಹೊಂದಿದೆ. ಹೀಗಾಗಿ, ಇಂಥ ಬೃಹತ್ ಸಂಘಟನೆಯ ಅಧ್ಯಕ್ಷ ಸ್ಥಾನವನ್ನು ಡಿ.1ರಿಂದ ಭಾರತ ವಹಿಸಿಕೊಳ್ಳುತ್ತದೆ’ ಎಂದು ಅವರು ವಿವರಿಸಿದರು.</p>.<p>‘ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿಯೇ ಭಾರತಕ್ಕೆ ಇಂಥ ಅದ್ಭುತ ಅವಕಾಶ ಲಭಿಸಿದೆ. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಉತ್ತಮ ಅವಕಾಶ ಒದಗಿಸಿದೆ’ ಎಂದು ಹೇಳಿದರು.</p>.<p>ಸಾಧನೆ–ಸಾಧಕರ ಪ್ರಸ್ತಾಪ: ತೆಲಂಗಾಣದ ನೇಕಾರ ಹರಿಪ್ರಸಾದ್ ಎಂಬುವವರು ಸ್ವತಃ ನೇಯ್ದಿದ್ದ ‘ಜಿ–20’ ಲಾಂಛನವನ್ನು ತಮಗೆ ನೀಡಿದ್ದನ್ನು ಮೋದಿ ಪ್ರಸ್ತಾಪಿಸಿ, ಅವರಿಗೆ ಧನ್ಯವಾದ ತಿಳಿಸಿದರು.</p>.<p>‘ವಿಕ್ರಮ್–ಎಸ್’ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್ಅಪ್ನ ಸಾಧನೆಯನ್ನು ಹೊಗಳಿದ ಅವರು, ಈ ಸಾಧನೆ ಪ್ರತಿಯೊಬ್ಬ ಭಾರತೀಯನ ಪಾಲಿಗೆ ಹೆಮ್ಮೆಯ ವಿಷಯ’ ಎಂದರು.</p>.<p>ಹಿಮಾಚಲಪ್ರದೇಶದ ಕಿನ್ನೌರ್ನಲ್ಲಿ ಡ್ರೋನ್ಗಳನ್ನು ಬಳಸಿ ಸೇಬು ಹಣ್ಣುಗಳನ್ನು ಸಾಗಾಟ ಮಾಡುತ್ತಿರುವುದು, ನಾಗಾ ಸಮುದಾಯದವರು ತಮ್ಮ ಕಲೆ, ಸಂಸ್ಕೃತಿ ಹಾಗೂ ಸಂಗೀತವನ್ನು ಕಾಪಾಡಿಕೊಂಡಿರುವುದನ್ನು ಪ್ರಸ್ತಾಪಿಸಿದರು.</p>.<p><strong>ಚೀನಾದೊಂದಿಗೆ ವ್ಯವಹರಿಸುವುದು ಸವಾಲಿನ ಕೆಲಸ: ಸರನ್</strong></p>.<p>‘ಜಿ–20 ಗುಂಪಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರುವ ಭಾರತಕ್ಕೆ, ಈ ಅವಧಿಯಲ್ಲಿ ನೆರೆಯ ಚೀನಾದೊಂದಿಗೆ ವ್ಯವಹರಿಸುವುದು ಸವಾಲಿನ ಕೆಲಸವಾಗಲಿದೆ’ ಎಂದು ಮಾಜಿ ಡೆಪ್ಯುಟಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಂಕಜ್ ಸರನ್ ಭಾನುವಾರ ಹೇಳಿದ್ದಾರೆ.</p>.<p>ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p>‘ದೇಶವು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂಬುದನ್ನು ಚೀನಾ ಮಾನ್ಯ ಮಾಡಬೇಕು. ಅಲ್ಲದೇ, ಆ ಸ್ಥಾನಕ್ಕೆ ತಕ್ಕಂತೆ ಚೀನಾ ತನ್ನೊಂದಿಗೆ ವ್ಯವಹರಿಸಬೇಕು ಎಂಬುದಾಗಿ ಭಾರತ ನಿರೀಕ್ಷಿಸುತ್ತದೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>