ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಾಂಗ್ರೆಸ್, ಟಿಎಂಸಿ, ಟಿಆರ್ಎಸ್ ಮತ್ತು ಡಿಎಂಕೆ ಪಕ್ಷಗಳ ಐವರು ಪ್ರತಿನಿಧಿಗಳು ರಾಷ್ಟ್ರಪತಿಯವರನ್ನು ಭೇಟಿಯಾಗಲು ಈ ಮೊದಲು ತೀರ್ಮಾನಿಸಿದ್ದವು. ನಂತರ ಶಿವಸೇನಾ ಮತ್ತು ಎನ್ಸಿಪಿ ಪ್ರತಿನಿಧಿಗಳು ಈ ಭೇಟಿಯಲ್ಲಿ ಜತೆಯಾಗುವುದಾಗಿ ತಿಳಿದುಬಂದಿತ್ತು. ಅಂತಿಮವಾಗಿ ರಾಜ್ಯಸಭೆಯ ವಿರೋಧಪಕ್ಷದ ನಾಯಕರೊಬ್ಬರನ್ನೇ ರಾಷ್ಟ್ರಪತಿಯವರ ಭೇಟಿಗೆ ಕಳುಹಿಸುವುದು ಸೂಕ್ತ ಎಂಬ ಒಮ್ಮತಕ್ಕೆ ಇತರ ವಿರೋಧ ಪಕ್ಷಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.