ಈ ಹುದ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ, ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ ಒಂದು ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ವಾದಿಸಿ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಐರಿಸ್ ರೋಡ್ರಿಗಸ್ ಗೋವಾದ ಬಾಂಬೆ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಪ್ರತಿವಾದಿಯಾಗಿರುವ ರಾಣೆ ಅವರು ಈ ಹುದ್ದೆಯ ಕಾನೂನುಬದ್ಧತೆ ಪರಿಶೀಲನೆಯನ್ನು ಕೋರ್ಟ್ ತೀರ್ಪಿಗೆಬಿಡುವುದಾಗಿ ಹೇಳಿದ್ದಾರೆ.