ಇಲ್ಲಿನ ಶಹೀದ್ ಮಿನಾರ್ ಮೈದಾನದಲ್ಲಿ ಆರ್ಎಸ್ಎಸ್ ಆಯೋಜಿಸಿದ ನೇತಾಜಿ ಅವರ 126ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವತ್ ಮಾತನಾಡಿದರು. ‘ಸುಭಾಸ್ ಬಾಬು (ನೇತಾಜಿ) ಅವರು ಮೊದಲಿಗೆ ಕಾಂಗ್ರೆಸ್ ಜೊತೆಗೇ ಇದ್ದರು. ಸತ್ಯಾಗ್ರಹದ ಹಾದಿಯನ್ನು ಅನುಸರಿಸಿದ್ದರು. ಆದರೆ, ಸ್ವಾತಂತ್ರ್ಯ ಹೋರಾಟಕ್ಕೆ ಇಷ್ಟು ಸಾಲದು ಎಂಬುದು ಅರಿವಾದಾಗ, ಭಿನ್ನ ಹಾದಿ ಹಿಡಿದರು. ಸನ್ನಿವೇಶಗಳು ಮತ್ತು ದಾರಿಗಳು ಭಿನ್ನವಾಗಿದ್ದರೂ ಗುರಿ ಒಂದೇ. ನಮ್ಮ ಮುಂದೆ ಅವರ ಆದರ್ಶಗಳು ಇವೆ. ಅವರು ಹೊಂದಿದ್ದ ಗುರಿಗಳು ನಮ್ಮದೂ ಆಗಿವೆ ಎಂದರು. ಭಾರತವು ಜಗತ್ತಿನ ಸಣ್ಣ ರೂಪ. ಭಾರತವು ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ನೇತಾಜಿ ಹೇಳಿದ್ದರು. ಆ ದಿಸೆಯಲ್ಲಿ ಕೆಲಸ ಮಾಡೋಣ’ ಎಂದು ಭಾಗವತ್ ಹೇಳಿದ್ದಾರೆ.