‘ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ, ಪ್ರಧಾ ನಮಂತ್ರಿ ಜನ ಆರೋಗ್ಯ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಷನ್, ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಮುಂತಾದವುಗಳಿಗೆ ಈ ನಿಧಿಯು ಬಳಕೆ ಆಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಎದುರಾಗ ಬಹುದಾದ ತುರ್ತು ಸಂದರ್ಭಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲು ಹಾಗೂ ‘ರಾಷ್ಟ್ರೀಯ ಆರೋಗ್ಯ ನೀತಿ–2017’ರಲ್ಲಿ ಘೋಷಿಸಲಾಗಿರುವ ಗುರಿ ಸಾಧಿಸಲು ಸಹ ಈ ನಿಧಿಯನ್ನು ಬಳಸಲಾಗುವುದು. ‘ಈ ನಿಧಿಯ ನಿರ್ವಹಣೆ ಮತ್ತು ಆಡಳಿತವನ್ನು ಆರೋಗ್ಯ ಸಚಿ ವಾಲಯ ನಡೆಸಲಿದೆ. ಆರೋಗ್ಯ ಸಂಬಂಧಿ ಯೋಜನೆಗಳಿಗೆ ಆಗುವ ವೆಚ್ಚಗಳನ್ನು ಮೊದಲು ಈ ನಿಧಿ ಯಿಂದ ಭರಿಸಲಾಗುವುದು. ಅದಾದ ಬಳಿಕ ಬಜೆಟ್ನಲ್ಲಿ ನೀಡ ಲಾದ ಅನುದಾನವನ್ನು ಬಳಕೆ ಮಾಡಲಾಗುವುದು.ನಿಧಿಯಲ್ಲಿ ಉಳಿದಿರುವ ಹಣವು ಆರ್ಥಿಕ ವರ್ಷದ ಅಂತ್ಯದಲ್ಲಿ ರದ್ದಾಗುವುದಿಲ್ಲ ಎಂಬ ಖಾತರಿ ಇರುವು ದರಿಂದ, ಇರುವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ ಎಂಬುದು ಈ ನಿಧಿಯ ಪ್ರಮುಖ ಲಾಭ’ ಎಂದು ಸರ್ಕಾರ ಹೇಳಿದೆ.