<p><strong>ಕೊಚ್ಚಿ: </strong>‘ಲಕ್ಷದ್ವೀಪದ ಪರಿಸರ ವ್ಯವಸ್ಥೆ, ಸಂಸ್ಕೃತಿಯ ಅಸ್ಮಿತೆ ಮತ್ತು ಜೀವನೋಪಾಯಕ್ಕೆ ಧಕ್ಕೆಯಾಗುವಂತಹ ಅಂಶಗಳಿರುವ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ–2021(ಎಲ್ಡಿಎಆರ್) ಪ್ರಸ್ತಾವನೆ ರದ್ದುಗೊಳಿಸಲು ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಹಲವು ವರ್ಷಗಳಿಂದ ಲಕ್ಷದ್ವೀಪದ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ವಿಜ್ಞಾನಿಗಳ ಗುಂಪೊಂದು ಪತ್ರ ಬರೆದಿದೆ.</p>.<p>ಲಕ್ಷದ್ವೀಪ ರೀಸರ್ಚ್ ಕಲೆಕ್ಟಿವ್ ಗುಂಪಿನ ಈ ವಿಜ್ಞಾನಿಗಳು ತಂಡ ಈ ಕುರಿತು ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ‘ಎಲ್ಡಿಎಆರ್ ಪ್ರಸ್ತಾವನೆಯಲ್ಲಿರುವ ಅನೇಕ ಅಂಶಗಳು ಲಕ್ಷದ್ವೀಪದಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಕಾನೂನು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಲಕ್ಷದ್ವೀಪದ ಪರಿಸರ ವ್ಯವಸ್ಥೆ, ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತವೆ‘ ಎಂದು ತಿಳಿಸಿದೆ.</p>.<p><strong>ಇದನ್ನೂ ಓದಿ–</strong> <a href="https://www.prajavani.net/india-news/filmmaker-ayesha-sulthana-booked-for-sedition-for-spreading-false-news-on-covid-19-in-lakshadweep-837888.html">ಲಕ್ಷದ್ವೀಪ: ‘ಜೈವಿಕ ಅಸ್ತ್ರ’ ಆರೋಪ, ನಟಿ ಆಯಿಷಾ ವಿರುದ್ಧ ದೇಶದ್ರೋಹ ಪ್ರಕರಣ | Prajavani</a></p>.<p>ಇಂಥ ಅಜಾಗರೂಕತೆಯಿಂದ ಕೂಡಿರುವ ಕರಡು ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಲು ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಲಕ್ಷದ್ವೀಪದ 60 ಮಂದಿ ವಿಜ್ಞಾನಿಗಳು ಸಹಿ ಹಾಕಿರುವ ಪತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕಳುಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ: </strong>‘ಲಕ್ಷದ್ವೀಪದ ಪರಿಸರ ವ್ಯವಸ್ಥೆ, ಸಂಸ್ಕೃತಿಯ ಅಸ್ಮಿತೆ ಮತ್ತು ಜೀವನೋಪಾಯಕ್ಕೆ ಧಕ್ಕೆಯಾಗುವಂತಹ ಅಂಶಗಳಿರುವ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ–2021(ಎಲ್ಡಿಎಆರ್) ಪ್ರಸ್ತಾವನೆ ರದ್ದುಗೊಳಿಸಲು ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಹಲವು ವರ್ಷಗಳಿಂದ ಲಕ್ಷದ್ವೀಪದ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ವಿಜ್ಞಾನಿಗಳ ಗುಂಪೊಂದು ಪತ್ರ ಬರೆದಿದೆ.</p>.<p>ಲಕ್ಷದ್ವೀಪ ರೀಸರ್ಚ್ ಕಲೆಕ್ಟಿವ್ ಗುಂಪಿನ ಈ ವಿಜ್ಞಾನಿಗಳು ತಂಡ ಈ ಕುರಿತು ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ‘ಎಲ್ಡಿಎಆರ್ ಪ್ರಸ್ತಾವನೆಯಲ್ಲಿರುವ ಅನೇಕ ಅಂಶಗಳು ಲಕ್ಷದ್ವೀಪದಲ್ಲಿ ಹಾಲಿ ಅಸ್ತಿತ್ವದಲ್ಲಿರುವ ಕಾನೂನು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಲಕ್ಷದ್ವೀಪದ ಪರಿಸರ ವ್ಯವಸ್ಥೆ, ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತವೆ‘ ಎಂದು ತಿಳಿಸಿದೆ.</p>.<p><strong>ಇದನ್ನೂ ಓದಿ–</strong> <a href="https://www.prajavani.net/india-news/filmmaker-ayesha-sulthana-booked-for-sedition-for-spreading-false-news-on-covid-19-in-lakshadweep-837888.html">ಲಕ್ಷದ್ವೀಪ: ‘ಜೈವಿಕ ಅಸ್ತ್ರ’ ಆರೋಪ, ನಟಿ ಆಯಿಷಾ ವಿರುದ್ಧ ದೇಶದ್ರೋಹ ಪ್ರಕರಣ | Prajavani</a></p>.<p>ಇಂಥ ಅಜಾಗರೂಕತೆಯಿಂದ ಕೂಡಿರುವ ಕರಡು ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಲು ರಾಷ್ಟ್ರಪತಿಯವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಲಕ್ಷದ್ವೀಪದ 60 ಮಂದಿ ವಿಜ್ಞಾನಿಗಳು ಸಹಿ ಹಾಕಿರುವ ಪತ್ರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕಳುಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>