ಅಲಿಗಡ ಮುಖ್ಯ ರಸ್ತೆಗಳಲ್ಲಿ ನಾವು ಪಾಕಿಸ್ತಾನ ಧ್ವಜಗಳನ್ನು ಅಂಟಿಸಿ ಪ್ರತಿಭಟನೆ ನಡೆಸಿದ್ದೇವೆ. ಪಾಕಿಸ್ತಾನ ಉಗ್ರಗಾಮಿಗಳು ಅಲ್ಲಿನ ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳನ್ನು ಕೆಡವಲು ಯಾರಿಂದಲೂ ಸಾಧ್ಯವಾಗಬಾರದು ಎಂಬುದನ್ನು ಖಚಿತಪಡಿಸಬೇಕಿದೆ ಎಂದು ಬಜರಂಗದಳ ಮುಖಂಡ ಗೌರವ್ ಶರ್ಮಾ ಹೇಳಿದರು.