ನ.15ರಂದು ಪೊಲೀಸ್, ಸೇನೆ ಹಾಗೂ ಸಿಆರ್ಪಿಎಫ್ ನಡೆಸಿದ ಎನ್ಕೌಂಟರ್ನಲ್ಲಿ ವಿದೇಶಿ ಉಗ್ರ ಬಿಲಾಲ್ ಭಾಯ್, ನಾಗರಿಕ ಅಲ್ತಾಫ್ ಭಟ್, ವೈದ್ಯ ಡಾ.ಮುದಾಸಿರ್ ಗುಲ್, ಉಗ್ರ ಸಹಚರ ಮೊಹಮ್ಮದ್ ಮಗ್ರೆ ಹತ್ಯೆಯಾಗಿದ್ದರು. ಈ ಘಟನೆಗೆ ಕಣಿವೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮ್ಯಾಜಿಸ್ಟ್ರಿಯಲ್ ತನಿಖೆಗೆ ಆದೇಶಿಸಿದ್ದರು.