ಹೈದರಾಬಾದ್: ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ‘ನಮ್ಮಕುಟುಂಬಕ್ಕೆ ಅವಮಾನ ಮಾಡುವಂತೆ, ನನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದರೆ ಚಪ್ಪಲಿಯಿಂದ ಹೊಡೆಯುತ್ತೇನೆ‘ ಎಂದುತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಪುತ್ರಿ ಮತ್ತು ಬಿಆರ್ಎಸ್ ಶಾಸಕಿ ಕೆ.ಕವಿತಾ ಹೇಳಿದ್ದಾರೆ.
ಈ ಹಿಂದೆ ‘ಬಿಜೆಪಿಯ ಕೆಲವು ಸ್ನೇಹಿತರು ಅವರ ಪಕ್ಷ ಸೇರುವಂತೆ ನನ್ನನ್ನು ಸಂಪರ್ಕಿಸಿದ್ದರು. ಆದರೆ, ನಾನು ಅವರ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದೆ’ ಎಂದುಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
#WATCH | Arvind ji is like 'Keechar', we don't throw stones at him. He is a 'Chhichora' kind of person. He has made an allegation today & that is why I'm here to talk to people. It's unfortunate that such a person is in BJP: TRS MLC K Kavitha pic.twitter.com/2ZJySs8OON
‘ನಾನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿರುವುದಾಗಿ ನಿಜಾಮಾಬಾದ್ ಕ್ಷೇತ್ರದ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರು ನೀಡಿರುವ ಹೇಳಿಕೆ ನಿರಾಧಾರ. ಇಂತಹ ಸುಳ್ಳು ಆರೋಪ ಮಾಡುವುದನ್ನು ಅವರು ನಿಲ್ಲಿಸಲಿ. ಇದೇ ವರ್ತನೆ ಮುಂದುವರೆಸಿದರೆ ಚಪ್ಪಲಿಯಲ್ಲಿ ಹೊಡೆಯಬೇಕಾಗುತ್ತದೆ ಎಂದು ಕವಿತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಸಿಆರ್ ಕುಟುಂಬಕ್ಕೆ ಅವಮಾನ ಮಾಡುವಂತೆ, ಕವಿತಾ ಅವರ ವಿರುದ್ಧಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರ ಮನೆ ಮೇಲೆ ಟಿಆರ್ಎಸ್ ಕಾರ್ಯಕರ್ತರು ಶುಕ್ರವಾರ ದಾಳಿ ನಡೆಸಿ, ದಾಂದಲೆ ಮಾಡಿದ್ದಾರೆ. ಸಂಸದರ ಪ್ರತಿಕೃತಿಯನ್ನೂ ದಹಿಸಿ ಪ್ರತಿಭಟಿಸಿದ್ದಾರೆ.
#WATCH | Telangana: BJP MP Arvind Dharmapuri's residence in Hyderabad attacked and vandalised allegedly by TRS supporters. Details awaited. pic.twitter.com/MYokgY6HGr