ವಾಸ್ತವ ನಿಯಂತ್ರಣ ರೇಖೆಯಲ್ಲಿ(ಎಲ್ಎಸಿ) ನಡೆದ ಘಟನೆಯು ದುಗುಡಗೊಳಿಸುವಂತಹದು ಎಂದು ಉಲ್ಲೇಖಿಸಿದ ಜೈಶಂಕರ್, ‘ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧಕ್ಕೆ ಎರಡೂ ಕಡೆಯಿಂದಲೂ ಹೆಚ್ಚಿನ ಕೆಲಸಗಳು ನಡೆದಿವೆ. ಆದರೆ ಈ ವರ್ಷ ನಡೆದ ಘಟನೆಯು ಇದಕ್ಕೆ ಪೂರಕವಾಗಿರಲಿಲ್ಲ. ಇಷ್ಟು ವರ್ಷಗಳಿಂದ ಕಾಪಾಡಿಕೊಂಡು ಬಂದಂತಹ ಸೌಹಾರ್ದತೆಯು ನಾಶವಾಗುತ್ತದೆಯೇ ಎನ್ನುವ ಆತಂಕ ಎದುರಾಗಿದೆ. ಹೌದು, ನಮ್ಮನ್ನು ಪರೀಕ್ಷಿಸಲಾಗುತ್ತಿದೆ. ಇದನ್ನು ಮೆಟ್ಟಿನಿಲ್ಲುವ ಭರವಸೆಯು ನನಗಿದೆ’ ಎಂದರು.