<p><strong>ಕೋಲ್ಕತ್ತ:</strong> ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ಗೋಧಿ ಪೂರೈಕೆಯಲ್ಲಿ ಕೊರತೆ ಕಾಡುತ್ತಿದೆಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದಾರೆ.</p>.<p>ಬಂಕುರಾ ಜಿಲ್ಲೆಯಲ್ಲಿ ಟಿಎಂಸಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಮತಾ, 'ಕೇಂದ್ರವು ನಮಗೆ ಗೋಧಿ ಪೂರೈಸುತ್ತಿಲ್ಲ. ವಿತರಿಸಲು ಗೋಧಿ ಇಲ್ಲ ಎಂದು ಹೇಳುತ್ತಿದೆ. ದೇಶದಾದ್ಯಂತ ಗೋಧಿ ಕೊರತೆಯಿದೆ. ಕೇಂದ್ರವು ಆರ್ಥಿಕ ನೀತಿ ದುರುಪಯೋಗದಿಂದ ಬಿಕ್ಕಟ್ಟು ಎದುರಾಗಿದೆ' ಎಂದು ಆರೋಪಿಸಿದರು.</p>.<p>ಇದನ್ನೂ ಓದಿ:<a href="https://www.prajavani.net/karnataka-news/congress-spokesperson-and-supreme-court-lawyer-brijesh-kalappa-resigned-from-congress-party-941427.html" itemprop="url">ಕಾಂಗ್ರೆಸ್ಗೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ </a></p>.<p>ನೋಟು ಅಮಾನ್ಯೀಕರಣ ನೀತಿಯನ್ನು ಖಂಡಿಸಿರುವ ಮಮತಾ, 'ಅದರಿಂದ ಸಾಧಿಸಿದ್ದೇನು? ಎಲ್ಲ ಹಣ ಎಲ್ಲಿ ಹೋಯಿತು' ಎಂದು ಪ್ರಶ್ನಿಸಿದರು.</p>.<p>'ಕೇಂದ್ರವು ನಮಗೆ ಹಣಕಾಸು ನೆರವು ಒದಗಿಸಬೇಕು. ರಾಜ್ಯಗಳಿಗೆ ಹಣಕಾಸು ನೆರವು ನೀಡಲು ಸಾಧ್ಯವಾಗದಿದ್ದರೆ, ಈ ದೇಶವನ್ನು ಆಳುವ ಹಕ್ಕು ನಿಮಗಿಲ್ಲ' ಎಂದು ಹೇಳಿದರು.</p>.<p>'ದೇಶದ ಆಸ್ತಿ, ರೈಲ್ವೆ, ವಿಮೆ ಹೀಗೆ ಎಲ್ಲವನ್ನೂ ಬಿಜೆಪಿ ಮಾರಾಟ ಮಾಡುವಲ್ಲಿ ನಿರತವಾಗಿದೆ. ಆರ್ಥಿಕತೆಯನ್ನು ನಿಭಾಯಿಸುವ ರೀತಿ ಇದಾಗಿದೆ. ದೇಶ ಕಂಡ ಅಸಮರ್ಥ ಪಕ್ಷ ಬಿಜೆಪಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೆ ದೇಶಕ್ಕೆ ಒಳಿತಾಗಲಿದೆ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯಿಂದಾಗಿ ಗೋಧಿ ಪೂರೈಕೆಯಲ್ಲಿ ಕೊರತೆ ಕಾಡುತ್ತಿದೆಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಆರೋಪಿಸಿದ್ದಾರೆ.</p>.<p>ಬಂಕುರಾ ಜಿಲ್ಲೆಯಲ್ಲಿ ಟಿಎಂಸಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಮತಾ, 'ಕೇಂದ್ರವು ನಮಗೆ ಗೋಧಿ ಪೂರೈಸುತ್ತಿಲ್ಲ. ವಿತರಿಸಲು ಗೋಧಿ ಇಲ್ಲ ಎಂದು ಹೇಳುತ್ತಿದೆ. ದೇಶದಾದ್ಯಂತ ಗೋಧಿ ಕೊರತೆಯಿದೆ. ಕೇಂದ್ರವು ಆರ್ಥಿಕ ನೀತಿ ದುರುಪಯೋಗದಿಂದ ಬಿಕ್ಕಟ್ಟು ಎದುರಾಗಿದೆ' ಎಂದು ಆರೋಪಿಸಿದರು.</p>.<p>ಇದನ್ನೂ ಓದಿ:<a href="https://www.prajavani.net/karnataka-news/congress-spokesperson-and-supreme-court-lawyer-brijesh-kalappa-resigned-from-congress-party-941427.html" itemprop="url">ಕಾಂಗ್ರೆಸ್ಗೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ </a></p>.<p>ನೋಟು ಅಮಾನ್ಯೀಕರಣ ನೀತಿಯನ್ನು ಖಂಡಿಸಿರುವ ಮಮತಾ, 'ಅದರಿಂದ ಸಾಧಿಸಿದ್ದೇನು? ಎಲ್ಲ ಹಣ ಎಲ್ಲಿ ಹೋಯಿತು' ಎಂದು ಪ್ರಶ್ನಿಸಿದರು.</p>.<p>'ಕೇಂದ್ರವು ನಮಗೆ ಹಣಕಾಸು ನೆರವು ಒದಗಿಸಬೇಕು. ರಾಜ್ಯಗಳಿಗೆ ಹಣಕಾಸು ನೆರವು ನೀಡಲು ಸಾಧ್ಯವಾಗದಿದ್ದರೆ, ಈ ದೇಶವನ್ನು ಆಳುವ ಹಕ್ಕು ನಿಮಗಿಲ್ಲ' ಎಂದು ಹೇಳಿದರು.</p>.<p>'ದೇಶದ ಆಸ್ತಿ, ರೈಲ್ವೆ, ವಿಮೆ ಹೀಗೆ ಎಲ್ಲವನ್ನೂ ಬಿಜೆಪಿ ಮಾರಾಟ ಮಾಡುವಲ್ಲಿ ನಿರತವಾಗಿದೆ. ಆರ್ಥಿಕತೆಯನ್ನು ನಿಭಾಯಿಸುವ ರೀತಿ ಇದಾಗಿದೆ. ದೇಶ ಕಂಡ ಅಸಮರ್ಥ ಪಕ್ಷ ಬಿಜೆಪಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೆ ದೇಶಕ್ಕೆ ಒಳಿತಾಗಲಿದೆ' ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>