<p><strong>ನವದೆಹಲಿ:</strong> ‘ನಮ್ಮ ಹೆಣ್ಣುಮಕ್ಕಳು ಗಾಜಿನ ಮನೆಯಿಂದ ಹೊರ ಬಂದಿದ್ದಾರೆ. ಸೇನೆಗೆ ಮಹಿಳಾ ಅಧಿಕಾರಿಗಳು ಸೇರಿದ್ದಾರೆ. ಲಿಂಗ ಸಮಾನತೆಯಿಂದ ಸೇನೆಯು ಇನ್ನಷ್ಟು ಬಲವಾಗಲಿದೆ. ಸೈನಿಕ ಶಾಲೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಪ್ರತಿಭಾನ್ವಿತರು ರೂಪುತಳೆಯುತ್ತಿದ್ದಾರೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.</p>.<p>ಗಣರಾಜ್ಯೋತ್ಸವ ಮುನ್ನಾದಿನವಾದ ಮಂಗಳವಾರ ದೇಶವನ್ನು ಉದ್ದೇಶಿಸಿ ಮಾಡಿದ ಅವರು, ‘ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ದೇಶವನ್ನು ಸದೃಢಗೊಳಿಸಿದೆ.ಮೂಲಭೂತ ಹಕ್ಕುಗಳನ್ನು ಸಂಭ್ರಮಿಸಲು ಸಂವಿಧಾನದಲ್ಲಿ ತಿಳಿಸಿದ ಮೂಲಭೂತ ಕರ್ತವ್ಯಗಳು ಪೂರಕ ವಾತಾವರಣ ಸೃಷ್ಟಿಸಿದೆ’ ಎಂದು ಪ್ರತಿಪಾದಿಸಿದರು.</p>.<p>‘ಕೋವಿಡ್ ರೂಪದ ಸವಾಲನ್ನು ದೇಶ ದೃಢವಾಗಿ ಎದುರಿಸಿದೆ. ಈಗ ದೃಢ ಮತ್ತು ಸೂಕ್ಷ್ಮತೆಯ ಭಾರತ ರೂಪುತಳೆಯುತ್ತಿದೆ. 73ನೇ ಗಣರಾಜ್ಯೋತ್ಸವದಲ್ಲಿ ಜನರು ‘ಭಾರತೀಯಕರಣ’ವನ್ನು ಸಂಭ್ರಮಿಸಬೇಕು’ ಎಂದೂ ಕರೆ ನೀಡಿದರು.</p>.<p>‘ಭಾರತದ ಪ್ರಜಾಪ್ರಭುತ್ವದ ವೈವಿಧ್ಯ ಮತ್ತು ಅನುರಣತೆಗೆ ವಿಶ್ವವ್ಯಾಪಿ ಶ್ಲಾಘನೆಯಿದೆ. ಏಕತೆ ಮತ್ತು ನಾವೆಲ್ಲರೂ ಒಂದು ಎಂಬ ಸ್ಫೂರ್ತಿಯಿಂದಲೇ ಪ್ರತಿವರ್ಷ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ಕೋವಿಡ್ನಿಂದಾಗಿ ಆ ಸಂಭ್ರಮವು ಮುಸುಕಾಗಿರಬಹುದು, ಆದರೆ ಉತ್ಸಾಹವು ಕುಗ್ಗಿಲ್ಲ’ ಎಂದು ಹೇಳಿದರು.</p>.<p>ಜನಸಂಖ್ಯೆ ಕಾರಣದಿಂದಾಗಿ ಕೋವಿಡ್ ನಿರ್ವಹಣೆಯು ಹೆಚ್ಚು ಸಂಕೀರ್ಣವಾಗಿತ್ತು. ಇಂತಹ ಸಂಕಷ್ಟ ಸ್ಥಿತಿಯಲ್ಲೂ ನಾವು ಸ್ಥಿರತೆ ಕಾಯ್ದುಕೊಂಡೆವು. ವೈದ್ಯಕೀಯ ಕ್ಷೇತ್ರದವರು ಅವಿರತ ದುಡಿದರು. ನಾಯಕತ್ವ, ನೀತಿ, ನಿರೂಪಕರು, ಆಡಳಿತಗಾರರು, ಸಕಾಲದಲ್ಲಿ ಮಧ್ಯಪ್ರವೇಶಿಸಿ ನಿರ್ಧಾರ ಕೈಗೊಂಡರು. ಆರ್ಥಿಕತೆಯ ದೃಷ್ಟಿಯಿಂದ ಇದು ಸವಾಲಿನದಾಗಿತ್ತು. ಆದರೆ, ಈ ಹಣಕಾಸು ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ ಎಂದರು.</p>.<p>ಕೃಷಿ ಮತ್ತು ಉತ್ಪಾದಕ ವಲಯದಲ್ಲಿನ ಪ್ರಗತಿಯಿಂದಾಗಿ ಆರ್ಥಿಕತೆಯ ಸಾಧನೆ ಸಾಧ್ಯವಾಗಿದೆ. ಕೃಷಿಕರು ಮುಖ್ಯವಾಗಿ ಯುವಕೃಷಿಕರು ಸಹಜ ಕೃಷಿ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದು, ಸಂತಸದ ಬೆಳವಣಿಗೆ ಎಂದರು.</p>.<p>ಮಹಾತ್ಮಗಾಂಧಿ ಅವರನ್ನು ಭಾಷಣದಲ್ಲಿ ಉಲ್ಲೇಖಿಸಿ, ‘ಉತ್ತಮ ಭಾರತ, ಜಗತ್ತು ನಿರ್ಮಿಸಲು ಗಣನೀಯ ಕೊಡುಗೆ ನೀಡುವುದು ಮತ್ತು ಉತ್ತಮ ಮನುಷ್ಯರಾಗಿ ಗಣರಾಜ್ಯೊತ್ಸವ ಆಚರಿಸುವುದು ಅವರಿಗೆ ಇಷ್ಟವಾಗಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ನಮ್ಮ ಹೆಣ್ಣುಮಕ್ಕಳು ಗಾಜಿನ ಮನೆಯಿಂದ ಹೊರ ಬಂದಿದ್ದಾರೆ. ಸೇನೆಗೆ ಮಹಿಳಾ ಅಧಿಕಾರಿಗಳು ಸೇರಿದ್ದಾರೆ. ಲಿಂಗ ಸಮಾನತೆಯಿಂದ ಸೇನೆಯು ಇನ್ನಷ್ಟು ಬಲವಾಗಲಿದೆ. ಸೈನಿಕ ಶಾಲೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಪ್ರತಿಭಾನ್ವಿತರು ರೂಪುತಳೆಯುತ್ತಿದ್ದಾರೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.</p>.<p>ಗಣರಾಜ್ಯೋತ್ಸವ ಮುನ್ನಾದಿನವಾದ ಮಂಗಳವಾರ ದೇಶವನ್ನು ಉದ್ದೇಶಿಸಿ ಮಾಡಿದ ಅವರು, ‘ಪ್ರಜಾಪ್ರಭುತ್ವ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ದೇಶವನ್ನು ಸದೃಢಗೊಳಿಸಿದೆ.ಮೂಲಭೂತ ಹಕ್ಕುಗಳನ್ನು ಸಂಭ್ರಮಿಸಲು ಸಂವಿಧಾನದಲ್ಲಿ ತಿಳಿಸಿದ ಮೂಲಭೂತ ಕರ್ತವ್ಯಗಳು ಪೂರಕ ವಾತಾವರಣ ಸೃಷ್ಟಿಸಿದೆ’ ಎಂದು ಪ್ರತಿಪಾದಿಸಿದರು.</p>.<p>‘ಕೋವಿಡ್ ರೂಪದ ಸವಾಲನ್ನು ದೇಶ ದೃಢವಾಗಿ ಎದುರಿಸಿದೆ. ಈಗ ದೃಢ ಮತ್ತು ಸೂಕ್ಷ್ಮತೆಯ ಭಾರತ ರೂಪುತಳೆಯುತ್ತಿದೆ. 73ನೇ ಗಣರಾಜ್ಯೋತ್ಸವದಲ್ಲಿ ಜನರು ‘ಭಾರತೀಯಕರಣ’ವನ್ನು ಸಂಭ್ರಮಿಸಬೇಕು’ ಎಂದೂ ಕರೆ ನೀಡಿದರು.</p>.<p>‘ಭಾರತದ ಪ್ರಜಾಪ್ರಭುತ್ವದ ವೈವಿಧ್ಯ ಮತ್ತು ಅನುರಣತೆಗೆ ವಿಶ್ವವ್ಯಾಪಿ ಶ್ಲಾಘನೆಯಿದೆ. ಏಕತೆ ಮತ್ತು ನಾವೆಲ್ಲರೂ ಒಂದು ಎಂಬ ಸ್ಫೂರ್ತಿಯಿಂದಲೇ ಪ್ರತಿವರ್ಷ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ಕೋವಿಡ್ನಿಂದಾಗಿ ಆ ಸಂಭ್ರಮವು ಮುಸುಕಾಗಿರಬಹುದು, ಆದರೆ ಉತ್ಸಾಹವು ಕುಗ್ಗಿಲ್ಲ’ ಎಂದು ಹೇಳಿದರು.</p>.<p>ಜನಸಂಖ್ಯೆ ಕಾರಣದಿಂದಾಗಿ ಕೋವಿಡ್ ನಿರ್ವಹಣೆಯು ಹೆಚ್ಚು ಸಂಕೀರ್ಣವಾಗಿತ್ತು. ಇಂತಹ ಸಂಕಷ್ಟ ಸ್ಥಿತಿಯಲ್ಲೂ ನಾವು ಸ್ಥಿರತೆ ಕಾಯ್ದುಕೊಂಡೆವು. ವೈದ್ಯಕೀಯ ಕ್ಷೇತ್ರದವರು ಅವಿರತ ದುಡಿದರು. ನಾಯಕತ್ವ, ನೀತಿ, ನಿರೂಪಕರು, ಆಡಳಿತಗಾರರು, ಸಕಾಲದಲ್ಲಿ ಮಧ್ಯಪ್ರವೇಶಿಸಿ ನಿರ್ಧಾರ ಕೈಗೊಂಡರು. ಆರ್ಥಿಕತೆಯ ದೃಷ್ಟಿಯಿಂದ ಇದು ಸವಾಲಿನದಾಗಿತ್ತು. ಆದರೆ, ಈ ಹಣಕಾಸು ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ ಎಂದರು.</p>.<p>ಕೃಷಿ ಮತ್ತು ಉತ್ಪಾದಕ ವಲಯದಲ್ಲಿನ ಪ್ರಗತಿಯಿಂದಾಗಿ ಆರ್ಥಿಕತೆಯ ಸಾಧನೆ ಸಾಧ್ಯವಾಗಿದೆ. ಕೃಷಿಕರು ಮುಖ್ಯವಾಗಿ ಯುವಕೃಷಿಕರು ಸಹಜ ಕೃಷಿ ಪದ್ಧತಿ ಅಳವಡಿಸಿಕೊಳ್ಳುತ್ತಿದ್ದಾರೆ. ಇದು, ಸಂತಸದ ಬೆಳವಣಿಗೆ ಎಂದರು.</p>.<p>ಮಹಾತ್ಮಗಾಂಧಿ ಅವರನ್ನು ಭಾಷಣದಲ್ಲಿ ಉಲ್ಲೇಖಿಸಿ, ‘ಉತ್ತಮ ಭಾರತ, ಜಗತ್ತು ನಿರ್ಮಿಸಲು ಗಣನೀಯ ಕೊಡುಗೆ ನೀಡುವುದು ಮತ್ತು ಉತ್ತಮ ಮನುಷ್ಯರಾಗಿ ಗಣರಾಜ್ಯೊತ್ಸವ ಆಚರಿಸುವುದು ಅವರಿಗೆ ಇಷ್ಟವಾಗಬಹುದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>