ಕಡಿಮೆ ಆದಾಯದ, ಆರ್ಥಿಕವಾಗಿ ದುರ್ಬಲ ವರ್ಗ ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ ಸೇರಿದವರಿಗೆ ದೇಶದಾದಾದ್ಯಂತ ಎರಡು ಕೋಟಿ ಮನೆಗಳನ್ನು ಸಬ್ಸಿಡಿ ರೂಪದ ಸಾಲದ ಮೂಲಕ ನಿರ್ಮಿಸುವ ಉದ್ದೇಶದಿಂದ ಈ ವಸತಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಆದರೆ. ಈ ಯೋಜನೆಯಡಿ ಮಂಜೂರಾದ ಸಾಲಗಳು ವಿಮಾ ರಕ್ಷಣೆ ಹೊಂದಿರದ ಕಾರಣ ಸಾಲಗಾರ ಮೃತಪಟ್ಟರೆ ಅಥವಾ ಅಂಗವೈಕಲ್ಯದ ಅಪಾಯ ಎದುರಾದರೆ ಪರಿಹಾರ ಇರದಿದ್ದ ಕಾರಣಕ್ಕೆ ಯೋಜನೆ ಕುಂಠಿತವಾಗಿದೆ’ ಎಂದು ಉದ್ಯಮ ಸಂಸ್ಥೆ ಸಿಐಐ ಹೇಳಿದೆ.