ಈ ಸಂಬಂಧ ಮಂಡಳಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿರುವ ಭಾರತವು, ಭಯೋತ್ಪಾದನೆ ವಿಚಾರವನ್ನೂ ರಾಜಕೀಯಗೊಳಿಸುವ ಪಾಕಿಸ್ತಾನದ ‘ನಿರ್ಲಜ್ಜ ಯತ್ನ’ವನ್ನು ಟೀಕಿಸಿದೆ. ಅಲ್ಕೈದಾ ನಿರ್ಬಂಧ ಸಮಿತಿಯಡಿ ಅಂಗಾರ ಅಪ್ಪಾಜಿ ಹಾಗೂ ಗೋಬಿಂದ ಪಟ್ನಾಯಕ್ ಹೆಸರು ಸೇರ್ಪಡೆಗೆ ಪಾಕಿಸ್ತಾನ ಪ್ರಯತ್ನಿಸಿತ್ತು. ಆದರೆ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ಪಾಕಿಸ್ತಾನದ ನಡೆಗೆ ಅಡ್ಡಿಪಡಿಸಿದೆ. ಇವರನ್ನು ಉಗ್ರರ ಪಟ್ಟಿಗೆ ಸೇರಿಸಲು ಅಗತ್ಯವಾದ ಸಾಕ್ಷ್ಯಗಳನ್ನು ಪಾಕಿಸ್ತಾನ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.