ನವದೆಹಲಿ: ಉಕ್ರೇನ್ ಮೇಲೆ ರಷ್ಯಾದ ಅತಿಕ್ರಮಣವನ್ನು ಖಂಡಿಸಿಲ್ಲ ಎಂದು ಭಾರತದ ನಿಲುವನ್ನು ಟೀಕಿಸಿದ್ದ ಐರೋಪ್ಯ ದೇಶಗಳು ಮತ್ತು ಅಮೆರಿಕಕ್ಕೆ ಭಾರತವು ತಿರುಗೇಟು ನೀಡಿದೆ. ‘ಏಷ್ಯಾ
ದಲ್ಲಿ ಚೀನಾದ ಯುದ್ಧ ಸ್ವರೂಪದ ನಡೆಗಳನ್ನು ಯೂರೋಪ್ ಕಡೆಗಣಿಸಿದೆ. ಅಫ್ಗಾನಿಸ್ತಾನದ ಎಲ್ಲಾ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ
ಎಸ್.ಜೈಶಂಕರ್ ಹೇಳಿದ್ದಾರೆ.