ಶುಕ್ರವಾರ ನಡೆದ ಎನ್ಎಸ್ಜಿ 36ನೇ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್ಎಸ್ಜಿ ಪ್ರಧಾನ ನಿರ್ದೇಶಕ (ಹೆಚ್ಚುವರಿ ಉಸ್ತುವಾರಿ) ಎಸ್.ಎಸ್.ದೇಸ್ವಾಲ್ ಅವರು, ‘ಶ್ರೀಲಂಕಾ ಪ್ರಧಾನಿಯವರಿಗೆ ರಕ್ಷಣೆ ನೀಡುವ ಪ್ರಧಾನಿಯವರ ಭದ್ರತಾ ವಿಭಾಗದ 21 ಸಿಬ್ಬಂದಿಗೆ ಎನ್ಎಸ್ಜಿಯವರು ನಿಕಟ ರಕ್ಷಣಾ ಕೌಶಲದ ತರಬೇತಿ ನೀಡಿದ್ದಾರೆ. ನಮ್ಮ ತಂಡದ ತರಬೇತಿಯನ್ನು ಶ್ರೀಲಂಕಾದ ಪ್ರಧಾನಿಯವರು ಶ್ಲಾಘಿಸಿ ಪತ್ರ ಬರೆದಿದ್ದಾರೆ‘ ಎಂದು ನೆನಪಿಸಿಕೊಂಡರು. ಆದರೆ ಯಾವ ಅವಧಿಯಲ್ಲಿ ಈ ತರಬೇತಿ ನೀಡಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡಲಿಲ್ಲ.