ಲಡಾಖ್ ಪ್ರದೇಶದಲ್ಲಿ ಮೇ ಹಾಗೂ ಜೂನ್ನಲ್ಲಿ ಚೀನಾ ಸೇನೆಯ ಯೋಧರನ್ನು ಎದುರಿಸಿದ21 ಸಿಬ್ಬಂದಿಗೆ ಶೌರ್ಯ ಪದಕ ನೀಡಲು ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ ಎಂದೂ ಐಟಿಬಿಪಿ ತಿಳಿಸಿದೆ. ಭಾರತ–ಚೀನಾ ಗಡಿಯಲ್ಲಿ ನಡೆದಿದ್ದ ಘರ್ಷಣೆ ಕುರಿತ ಮಾಹಿತಿಯನ್ನುಇದೇ ಮೊದಲ ಬಾರಿಗೆ ನೀಡಿರುವ ಐಟಿಬಿಪಿ, ‘ಮುನ್ನುಗ್ಗುತ್ತಿದ್ದ ಚೀನಾ ಪೀಪಲ್ಸ್ ಲಿಬರೇಷನ್ ಸೇನೆಯ(ಪಿಎಲ್ಎ) ಯೋಧರಿಗೆ ನಮ್ಮ ಸಿಬ್ಬಂದಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಇಡೀ ರಾತ್ರಿ ಸಿಬ್ಬಂದಿ ಅಲ್ಲಿ ಹೋರಾಡಿದ್ದರು. ಕಲ್ಲು ಎಸೆಯುತ್ತಿದ್ದ ಪಿಎಲ್ಎ ಯೋಧರಿಗೆ ತಕ್ಕ ಉತ್ತರವನ್ನು ನಮ್ಮ ಸಿಬ್ಬಂದಿ ನೀಡಿದ್ದರು’ ಎಂದು ತಿಳಿಸಿದೆ.