<p><strong>ನವದೆಹಲಿ</strong>: ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಬಾಲಿವುಡ್ನಲ್ಲಿ ಕೋಮವಾದದ ಕುರಿತು ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತ ವಿಡಿಯೊವೊಂದನ್ನು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.</p><p>‘ಯಾರಿಗೂ ನೋವುಂಟು ಮಾಡವುದು ನನ್ನ ಉದ್ದೇಶವಾಗಿರಲಿಲ್ಲ’ ಎಂದು ಹೇಳಿರುವ ಅವರು, ಕೆಲವೊಮ್ಮೆ ಮಾತು, ಅದರಲ್ಲಿರುವ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.</p><p>'ಭಾರತ ದೇಶ ನನ್ನ ಮನೆ, ಸ್ಫೂರ್ತಿ ಮತ್ತು ನನ್ನ ಗುರು. ಭಾರತದ ಸಂಸ್ಕೃತಿಯನ್ನು ಆಚರಿಸಲು ಮತ್ತು ಗೌರವಿಸಲು ನನಗೆ ಸಂಗೀತ ಒಂದು ಮಾರ್ಗವಾಗಿದೆ’ ಎಂದು ತಮಗಿರುವ ದೇಶದ ಬಗೆಗಿನ ಪ್ರೀತಿಯನ್ನು ರೆಹಮಾನ್ ವಿವರಿಸಿದ್ದಾರೆ.</p>.ಹತ್ತೇ ವರ್ಷಗಳಲ್ಲಿ ಜಾತಿ ತಾರತಮ್ಯ ತೊಡೆದು ಹಾಕಲು ಸಲಹೆ ನೀಡಿದ ಭಾಗವತ್.<p>‘ನನಗನ್ನಿಸುತ್ತದೆ, ಕೆಲವೊಮ್ಮೆ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಆದರೆ, ನಾನು ಯಾರಿಗೂ ನೋವುಂಟು ಮಾಡಲು ಬಯಸಿಲ್ಲ. ನನ್ನ ಉದ್ದೇಶ, ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ನೀಡುವುದಾಗಿದೆ. ಈವರೆಗೂ ನಾನು ಪ್ರಾಮಾಣಿಕವಾಗಿಯೇ ಕೆಲಸ ಮಾಡಿದ್ದೇನೆ ಎಂಬುದು ನನ್ನ ಭಾವನೆ’ ಎಂದು ಸ್ಪಷ್ಟಪಡಿಸಿದ್ದಾರೆ.</p> .BBK12: ಬಿಗ್ಬಾಸ್ ಮುಗಿಯುವ ಹೊತ್ತಲ್ಲಿ ಕಿಚ್ಚ ಸುದೀಪ್ ವಿಶೇಷ ಪೋಸ್ಟ್.ಬಾಲಿವುಡ್ನಲ್ಲಿ ಕೋಮುವಾದ.. ರೆಹಮಾನ್ ಪೂರ್ವಾಗ್ರಹ ಪೀಡಿತ ವ್ಯಕ್ತಿ ಎಂದ ಕಂಗನಾ.ಸುತ್ತೂರು ಜಾತ್ರಾ ಮಹೋತ್ಸವ| ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿದ್ದರಾಮಯ್ಯ.<p>ಇತ್ತೀಚೆಗೆ ರೆಹಮಾನ್ ಅವರು, ಬಿಬಿಸಿ, ಏಷಿಯನ್ ನೆಟ್ವರ್ಕ್ಗೆ ನೀಡಿದ ಸಂದರ್ಶನದಲ್ಲಿ ‘ಕಳೆದ ಕೆಲವು ವರ್ಷಗಳಿಂದ ಹಿಂದಿ ಚಿತ್ರೋದ್ಯಮದಲ್ಲಿ ಅಧಿಕಾರ ಬದಲಾವಣೆಯಿಂದಾಗಿ ಕೆಲಸ ಕಡಿಮೆಯಾಗಿದೆ ಮತ್ತು ಅದು ಕೋಮುವಾದದ ವಿಷಯದಿಂದಲೂ’ ಆಗಿರಬಹುದು ಎಂದು ಹೇಳಿದ್ದರು.</p><p>‘ಚಿತ್ರರಂಗದಲ್ಲಿ ಸೃಜನಶೀಲರಲ್ಲದ ಜನರು ಈಗ ಕೆಲವು ವಿಷಯಗಳನ್ನು ನಿರ್ಧರಿಸುವ ಶಕ್ತಿ ಹೊಂದಿದ್ದಾರೆ. ಅದು ಕೋಮುವಾದದ ವಿಷಯವೂ ಆಗಿರಬಹುದು. ಆದರೆ ನನ್ನ ದೃಷ್ಟಿಯಲ್ಲಿ ಅಲ್ಲ’ ಎಂದು ಹೇಳಿದ್ದರು. ಈ ಹೇಳಿಕೆಗಳಿಗೆ ಟೀಕೆಗಳು ವ್ಯಕ್ತವಾಗಿದ್ದವು. </p>.IND vs NZ |ವಿರಾಟ್ ಆಟ ವ್ಯರ್ಥ: 41 ರನ್ಗಳಿಂದ ಸೋತು ಸರಣಿ ಕೈಚೆಲ್ಲಿದ ಗಿಲ್ ಪಡೆ.ಮಗಳಿಗೆ ‘ಪಾರ್ವತಿ’ ಎಂದು ನಾಮಕರಣ ಮಾಡಿದ ರಾಜ್ಕುಮಾರ್ ರಾವ್.<p><strong>’ಜಾವೇದ್ ಅಕ್ತರ್ ಹೇಳಿಕೆ ತಳ್ಳಿಹಾಕಿದ ಮುಫ್ತಿ’ </strong></p><p><strong>ಶ್ರೀನಗರ:</strong> ‘ಬಾಲಿವುಡ್ನಲ್ಲಿ ಕೋಮುವಾದ ಕುರಿತು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಆರೋಪವನ್ನು ತಳ್ಳಿಹಾಕುವ ಮೂಲಕ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಭಾರತೀಯ ಮುಸ್ಲಿಮರ ವಾಸ್ತವ ಸ್ಥಿತಿಗೆ ವಿರುದ್ಧವಾಗಿದ್ದಾರೆ’ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ. ‘ಮುಂಬೈನಂತಹ ಕಾಸ್ಮೋಪಾಲಿಟನ್ ನಗರದಲ್ಲಿ ಮುಸ್ಲಿಮರಿಗೆ ಮನೆ ಕೊಡಲು ನಿರಾಕರಿಸಿರುವ ಕುರಿತು ಸ್ವತಃ ಜಾವೇದ್ ಅವರ ಪತ್ನಿ ಶಬಾನಾ ಅಜ್ಮಿ ಸೇರಿದಂತೆ ಹಲವರು ಮುಕ್ತವಾಗಿ ಮಾತನಾಡಿದ್ದಾರೆ. ಮುಸ್ಲಿಮರು ಎದುರಿಸುತ್ತಿರುವ ಇಂಥ ವಾಸ್ತವಗಳಿಗೆ ಅವರು ವಿರುದ್ಧವಾಗಿದ್ದಾರೆ’ ಎಂದು ಮುಫ್ತಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ‘ಬಾಲಿವುಡ್ನಲ್ಲಿ ರೆಹಮಾನ್ ಅವರಿಗೆ ಕೆಲಸ ಕಡಿಮೆಯಾಗುವುದರಲ್ಲಿ ಯಾವುದೇ ಕೋಮುವಾದದ ಅಂಶವಿಲ್ಲ’ ಎಂದು ಅಖ್ತರ್ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಬಾಲಿವುಡ್ನಲ್ಲಿ ಕೋಮವಾದದ ಕುರಿತು ನೀಡಿದ್ದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತ ವಿಡಿಯೊವೊಂದನ್ನು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.</p><p>‘ಯಾರಿಗೂ ನೋವುಂಟು ಮಾಡವುದು ನನ್ನ ಉದ್ದೇಶವಾಗಿರಲಿಲ್ಲ’ ಎಂದು ಹೇಳಿರುವ ಅವರು, ಕೆಲವೊಮ್ಮೆ ಮಾತು, ಅದರಲ್ಲಿರುವ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.</p><p>'ಭಾರತ ದೇಶ ನನ್ನ ಮನೆ, ಸ್ಫೂರ್ತಿ ಮತ್ತು ನನ್ನ ಗುರು. ಭಾರತದ ಸಂಸ್ಕೃತಿಯನ್ನು ಆಚರಿಸಲು ಮತ್ತು ಗೌರವಿಸಲು ನನಗೆ ಸಂಗೀತ ಒಂದು ಮಾರ್ಗವಾಗಿದೆ’ ಎಂದು ತಮಗಿರುವ ದೇಶದ ಬಗೆಗಿನ ಪ್ರೀತಿಯನ್ನು ರೆಹಮಾನ್ ವಿವರಿಸಿದ್ದಾರೆ.</p>.ಹತ್ತೇ ವರ್ಷಗಳಲ್ಲಿ ಜಾತಿ ತಾರತಮ್ಯ ತೊಡೆದು ಹಾಕಲು ಸಲಹೆ ನೀಡಿದ ಭಾಗವತ್.<p>‘ನನಗನ್ನಿಸುತ್ತದೆ, ಕೆಲವೊಮ್ಮೆ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಆದರೆ, ನಾನು ಯಾರಿಗೂ ನೋವುಂಟು ಮಾಡಲು ಬಯಸಿಲ್ಲ. ನನ್ನ ಉದ್ದೇಶ, ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ನೀಡುವುದಾಗಿದೆ. ಈವರೆಗೂ ನಾನು ಪ್ರಾಮಾಣಿಕವಾಗಿಯೇ ಕೆಲಸ ಮಾಡಿದ್ದೇನೆ ಎಂಬುದು ನನ್ನ ಭಾವನೆ’ ಎಂದು ಸ್ಪಷ್ಟಪಡಿಸಿದ್ದಾರೆ.</p> .BBK12: ಬಿಗ್ಬಾಸ್ ಮುಗಿಯುವ ಹೊತ್ತಲ್ಲಿ ಕಿಚ್ಚ ಸುದೀಪ್ ವಿಶೇಷ ಪೋಸ್ಟ್.ಬಾಲಿವುಡ್ನಲ್ಲಿ ಕೋಮುವಾದ.. ರೆಹಮಾನ್ ಪೂರ್ವಾಗ್ರಹ ಪೀಡಿತ ವ್ಯಕ್ತಿ ಎಂದ ಕಂಗನಾ.ಸುತ್ತೂರು ಜಾತ್ರಾ ಮಹೋತ್ಸವ| ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿದ್ದರಾಮಯ್ಯ.<p>ಇತ್ತೀಚೆಗೆ ರೆಹಮಾನ್ ಅವರು, ಬಿಬಿಸಿ, ಏಷಿಯನ್ ನೆಟ್ವರ್ಕ್ಗೆ ನೀಡಿದ ಸಂದರ್ಶನದಲ್ಲಿ ‘ಕಳೆದ ಕೆಲವು ವರ್ಷಗಳಿಂದ ಹಿಂದಿ ಚಿತ್ರೋದ್ಯಮದಲ್ಲಿ ಅಧಿಕಾರ ಬದಲಾವಣೆಯಿಂದಾಗಿ ಕೆಲಸ ಕಡಿಮೆಯಾಗಿದೆ ಮತ್ತು ಅದು ಕೋಮುವಾದದ ವಿಷಯದಿಂದಲೂ’ ಆಗಿರಬಹುದು ಎಂದು ಹೇಳಿದ್ದರು.</p><p>‘ಚಿತ್ರರಂಗದಲ್ಲಿ ಸೃಜನಶೀಲರಲ್ಲದ ಜನರು ಈಗ ಕೆಲವು ವಿಷಯಗಳನ್ನು ನಿರ್ಧರಿಸುವ ಶಕ್ತಿ ಹೊಂದಿದ್ದಾರೆ. ಅದು ಕೋಮುವಾದದ ವಿಷಯವೂ ಆಗಿರಬಹುದು. ಆದರೆ ನನ್ನ ದೃಷ್ಟಿಯಲ್ಲಿ ಅಲ್ಲ’ ಎಂದು ಹೇಳಿದ್ದರು. ಈ ಹೇಳಿಕೆಗಳಿಗೆ ಟೀಕೆಗಳು ವ್ಯಕ್ತವಾಗಿದ್ದವು. </p>.IND vs NZ |ವಿರಾಟ್ ಆಟ ವ್ಯರ್ಥ: 41 ರನ್ಗಳಿಂದ ಸೋತು ಸರಣಿ ಕೈಚೆಲ್ಲಿದ ಗಿಲ್ ಪಡೆ.ಮಗಳಿಗೆ ‘ಪಾರ್ವತಿ’ ಎಂದು ನಾಮಕರಣ ಮಾಡಿದ ರಾಜ್ಕುಮಾರ್ ರಾವ್.<p><strong>’ಜಾವೇದ್ ಅಕ್ತರ್ ಹೇಳಿಕೆ ತಳ್ಳಿಹಾಕಿದ ಮುಫ್ತಿ’ </strong></p><p><strong>ಶ್ರೀನಗರ:</strong> ‘ಬಾಲಿವುಡ್ನಲ್ಲಿ ಕೋಮುವಾದ ಕುರಿತು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಆರೋಪವನ್ನು ತಳ್ಳಿಹಾಕುವ ಮೂಲಕ ಗೀತರಚನೆಕಾರ ಜಾವೇದ್ ಅಖ್ತರ್ ಅವರು ಭಾರತೀಯ ಮುಸ್ಲಿಮರ ವಾಸ್ತವ ಸ್ಥಿತಿಗೆ ವಿರುದ್ಧವಾಗಿದ್ದಾರೆ’ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕಿಡಿಕಾರಿದ್ದಾರೆ. ‘ಮುಂಬೈನಂತಹ ಕಾಸ್ಮೋಪಾಲಿಟನ್ ನಗರದಲ್ಲಿ ಮುಸ್ಲಿಮರಿಗೆ ಮನೆ ಕೊಡಲು ನಿರಾಕರಿಸಿರುವ ಕುರಿತು ಸ್ವತಃ ಜಾವೇದ್ ಅವರ ಪತ್ನಿ ಶಬಾನಾ ಅಜ್ಮಿ ಸೇರಿದಂತೆ ಹಲವರು ಮುಕ್ತವಾಗಿ ಮಾತನಾಡಿದ್ದಾರೆ. ಮುಸ್ಲಿಮರು ಎದುರಿಸುತ್ತಿರುವ ಇಂಥ ವಾಸ್ತವಗಳಿಗೆ ಅವರು ವಿರುದ್ಧವಾಗಿದ್ದಾರೆ’ ಎಂದು ಮುಫ್ತಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ‘ಬಾಲಿವುಡ್ನಲ್ಲಿ ರೆಹಮಾನ್ ಅವರಿಗೆ ಕೆಲಸ ಕಡಿಮೆಯಾಗುವುದರಲ್ಲಿ ಯಾವುದೇ ಕೋಮುವಾದದ ಅಂಶವಿಲ್ಲ’ ಎಂದು ಅಖ್ತರ್ ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>