ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಅಭಿಯಾನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ತೀವ್ರವಾಗಿ ಟೀಕಿಸಿದ್ದು, ಅಲ್ಲಿನ ಜನ ಉದ್ಯೋಗ, ಉತ್ತಮ ವ್ಯವಹಾರ ಮತ್ತು ಪ್ರೀತಿ ಬಯಸಿದ್ದರೆ, ಬಿಜೆಪಿಯಿಂದ ಸಿಕ್ಕಿರುವುದು ‘ಬುಲ್ಡೋಜರ್’ ಎಂದು ಕುಟುಕಿದ್ದಾರೆ.