‘ಆಯೋಗದಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ. ಮೊದಲೇ ನಿರ್ಧಾರವಾಗಿರುವಂತಹ ಫಲಿತಾಂಶ ನೀಡುವ ಪ್ರಕ್ರಿಯೆಯ ಭಾಗವಾಗಲು ಪಕ್ಷ ಇಚ್ಛಿಸುವುದಿಲ್ಲ. ಇದರಿಂದ ಜಮ್ಮು–ಕಾಶ್ಮೀರದ ಜನರ ಹಿತಾಸಕ್ತಿಗೆ ಮತ್ತಷ್ಟು ತೊಂದರೆ ಉಂಟಾಗಬಹುದು’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಲೋನ್ ಹಂಜುರಾ ಅವರು ಪತ್ರದಲ್ಲಿ ಹೇಳಿದ್ದಾರೆ.